ಮಂಗಳೂರು: ಯೋಗವು ಭಾರತ ವಿಶ್ವಕ್ಕೆ ನೀಡಿದ ಅನರ್ಘ್ಯ ರತ್ನ. ಇಂದು ಯೋಗ ವಿಶ್ವವ್ಯಾಪಿಯಾಗಿದೆ. ಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರ ನಡೆಯುತ್ತಿದೆ, ಇದರಿಂದ ಯೋಗಾಸಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಯೋಗಾಸಕ್ತರಿಗೆ ಪರಿಣತ ಯೋಗ ಶಿಕ್ಷಕರ ತ್ವರಿತ ಸಂಪರ್ಕ ಸಾಧ್ಯವಾಗಲು ದೇಲಂಪಾಡಿ ಯೋಗ ಪ್ರತಿಷ್ಠಾನ, ಮಂಗಳೂರು ಮತ್ತು ರಾಮಕೃಷ್ಣ ಮಠ, ಮಂಗಳೂರು ಜಂಟಿ ಸಹಯೋಗದಲ್ಲಿ ಯೋಗಾಸಕ್ತರ ಅನುಕೂಲಕ್ಕಾಗಿ ಹತ್ತು ವರ್ಷಗಳಿಗೂ ಮಿಗಿಲಾಗಿ ನಿರಂತರವಾಗಿ ಯೋಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ, ಯೋಗ ಶಿಕ್ಷಣವನ್ನು ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಯೋಗ ಶಿಕ್ಷಕರ ಸಂಪರ್ಕ ಕೈಪಿಡಿಯನ್ನು ಹೊರತರಲು ಉದ್ದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಸಮಯದಿಂದ ನಿರಂತರವಾಗಿ ಯೋಗ ಶಿಕ್ಷಣವನ್ನು ನೀಡುತ್ತಾ ಬಂದಿರುವ ಯೋಗಶಿಕ್ಷಕರಲ್ಲಿ ಈಕೆಳಗೆ ನೀಡಲಾದ ಕ್ಯೂಆರ್ ಕೋಡ್ ಅಥವಾ ಲಿಂಕ್ (Please paste link) ಬಳಸಿ ತಮ್ಮ ಮಾಹಿತಿ (ತಮ್ಮ ಹೆಸರು, ವಿಳಾಸ ಹಾಗು ತಾವು ನಿರಂತರವಾಗಿ ಯೋಗ ಶಿಕ್ಷಣ ನೀಡುತ್ತಾ ಬಂದಿರುವುದರ ಕುರಿತು ದೃಢೀಕರಣ ಪ್ರಮಾಣ ಪತ್ರ) ಯನ್ನು ಫೆಬ್ರವರಿ ೧೫ ರ ಒಳಗೆ ನೋಂದಾಯಿಸಬೇಕಾಗಿ ವಿನಂತಿಸಲಾಗಿದೆ.
ಗೂಗಲ್ ಲಿಂಕ್ - https://forms.gle/3zyVREkQyqRghfVh8
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ