ಕಚ್ಚೂರು ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಅವಿರೋಧ ಆಯ್ಕೆ ಹಾಗೂ ಅಧ್ಯಕ್ಷ, ಉಪಾಧ್ಯಕ್ಷರ ಪುನರಾಯ್ಕೆ

Upayuktha
0



ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ಇದರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಯು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಚಂದ್ರಶೇಖರ್ ಕೆ. ಹಾಗೂ ಉಪಾಧ್ಯಕ್ಷರಾಗಿ ರಾಮ ಭಂಡಾರಿ ಹೆಚ್ ಪುನರಾಯ್ಕೆಯಾಗಿರುತ್ತಾರೆ. 



ನಿರ್ದೇಶಕರಾಗಿ ರವೀಂದ್ರನಾಥ ಉಳ್ಳಾಲ್, ರಘುವೀರ ಭಂಡಾರಿ, ದಿವಾಕರ ಶಂಬೂರು, ರಾಜಾ ಬಂಟ್ವಾಳ್, ಶಶಿಧರ್ ಕೆ., ಬಿ.ಎಸ್.ಭಂಡಾರಿ, ಕುಮಾರ್ ಭಂಡಾರಿ, ಹರೀಶ್ ಪಿ. ಭಂಡಾರಿ, ಅಶೋಕ್ ಜಿ., ಶೇಖರ್ ಹೆಚ್., ಶಾಂತಾ ಬಿ.ಎಸ್., ರಮನಾಥ ಭಂಡಾರಿ, ರಮೇಶ್ ಸಿ.ಎಂ. ಭಂಡಾರಿ ಹಾಗೂ ಶಶಿಕಲಾ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 



ಸಹಕಾರ ಚುನಾವಣಾ ಆಯೋಗದ ಮೂಲಕ ಚುನಾವಣಾ ಪ್ರಕ್ರಿಯೆ ನಡೆದಿದು, ಸುಕನ್ಯಾ ತಾಲುಕು ಪಂಚಾಯತ್ ಯೋಜನಾಧಿಕಾರಿ ಪುತ್ತೂರು ಇವರು ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಕಚ್ಚೂರು ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಎಂ. ಉಪಸ್ಥಿತರಿದ್ದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top