ಮಂಗಳೂರು: ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಆಯೋಜಿಸಿದ "ಅಮೃತ ಆರೋಗ್ಯ ಮೇಳ" ವು ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ರವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು. ಏನಪೋಯ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು ಆಸ್ಪತ್ರೆಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಈ ಶಿಬಿರವನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಗಳ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಉದ್ಘಾಟಿಸಿದರು.
ಅವರು ಮಾತನಾಡಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಆಶ್ರಮದ ಮಾನವೀಯ ಸೇವಾ ಉಪಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು ಕಳೆದ 25 ವರ್ಷಗಳಿಂದ ಹೆಚ್ಚಿನ ಪ್ರಚಾರ ಪಡೆಯದೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.ಆತ್ಮಶಕ್ತಿ ಹಾಗೂ ಬಿಲ್ಲವ ಸಂಘಗಳ ಹೆಚ್ಚಿನ ಶಿಬಿರಗಳಲ್ಲಿ ಮಠದ ವೈದ್ಯಕೀಯ ತಂಡ ಉಚಿತವಾಗಿ ತಪಾಸಣೆ ನಡೆಸಿ ಔಷಧಗಳನ್ನು ಕೂಡ ಉಚಿತವಾಗಿ ವಿತರಣೆ ಮಾಡಿಕೊಂಡು ಬಂದಿದ್ದಾರೆ.ಇಂತಹ ಉಚಿತ ಶಿಬಿರಗಳು ಜನರು ರೋಗ ಬರುವ ಸಾಕಷ್ಟು ಮುಂಚಿತವಾಗಿ ಕಂಡುಬರುವ ಪೂರ್ವ ಲಕ್ಷಣಗಳನ್ನು ಗುರುತಿಸಿ ರೋಗಬರದಂತೆ ತಡೆಯಲು ಅತ್ಯಂತ ಉಪಯುಕ್ತ ವಿಧಾನವಾಗಿದೆ.ಅಮ್ಮನವರ ಆಶೀರ್ವಾದವನ್ನು ನಡೆಯುವ ಈ ಶಿಬಿರದಲ್ಲಿ ಬಂದಂತ ಎಲ್ಲರಿಗೂ ಆರೋಗ್ಯ ಪೂರ್ಣ ಜೀವನವನ್ನು ನೀಡಿ ಹರಸಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.
ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ಸುಚಿತ್ರಾ ರಾವ್ ಸ್ವಾಗತಿಸಿದರು.ಡಾಕ್ಟರ್ ದೇವದಾಸ್ ಪುತ್ರನ್ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಏನಪೋಯ ದಂತ ವೈದ್ಯಕೀಯ ಆಸ್ಪತ್ರೆಯ ಡಾ.ಸುಪ್ರಿಯಾ ಎ., ಸೇವಾ ಸಮಿತಿಯ ಉಪಾದ್ಯಕ್ಷ ಸುರೇಶ್ ಅಮೀನ್, ದಿಲೀಪ್ ಕುಮಾರ್, ರಾಜನ್, ಆಯುಧ್ ನ ಡಾ.ತನುಷಾ ಶೆಟ್ಟಿ, ಪೂರ್ಣಿಮಾ, ರೂಪಾ, ಆತ್ಮಶಕ್ತಿಯ ಗೋಪಾಲ್, ಏನಪೋಯ ಆಸ್ಪತ್ರೆಯ ಭರತ್, ಸಮೀರ್ , ನಮಿತ ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕರು ವಿವಿಧ ತಜ್ಞ ವೈದರಿಂದ ಉನ್ನತ ತಪಾಸಣೆ, ದಂತ ಚಿಕಿತ್ಸೆ ಮೊದಲಾದ ಸೌಲಭ್ಯಗಳ ಪ್ರಯೋಜನ ಪಡೆದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


