ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಫೆಬ್ರವರಿ 2 ರಿಂದ 18ರ ವರೆಗೆ "ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ" ಹಾಗೂ "ಮಧ್ವ ನವರಾತ್ರಿ ಉತ್ಸವ"ದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಶ್ರೀ ಪುರಂದರದಾಸ ಆರಾಧನೆ :
ಫೆಬ್ರವರಿ 2 ರಿಂದ 9 ಪ್ರತಿದಿನ ಸಂಜೆ 6-30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು : ಫೆಬ್ರವರಿ 2 : ಪರಮಪೂಜ್ಯ ಶ್ರೀ 1008 ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶೀರ್ವಚನ. ಫೆಬ್ರವರಿ 3 : ನಾಡಿನ ಹೆಸರಾಂತ ಕಲಾವಿದರುಗಳಾದ ವಿದ್ವಾನ್ ಅನಂತಕುಲಕರ್ಣಿ, ವಿದ್ವಾನ್ ರಾಯಚೂರು ಶೇಷಗಿರಿದಾಸ್, ವಿದುಷಿ ದಿವ್ಯಾ ಗಿರಿಧರ್, ವಿದುಷಿ ಭಾರ್ಗವಿ ಗುಡಿ ಮತ್ತು ಸಂಗಡಿಗರಿಂದ "ದಾಸರ ಪದಗಳ ಅಂತ್ಯಾಕ್ಷರಿ", ಫೆಬ್ರವರಿ 4 : ನಾದಸ್ವಾದ ಸಂಸ್ಥೆಯ ಶ್ರೀ ಶ್ರೀವತ್ಸ ಕಶ್ಯಪ್ ಮತ್ತು ಸಂಗಡಿಗರಿಂದ "ಕರ್ನಾಟಕ ವಾದ್ಯ ಸಂಗೀತ", ಫೆಬ್ರವರಿ 5 : ಚಾಂದನಿ ಗರ್ತಿಕೆರೆ ಮತ್ತು ಸಂಗಡಿಗರಿಂದ "ಹರಿದಾಸ ಮಂಜರಿ", ಫೆಬ್ರವರಿ 6 : ರಾಯಚೂರಿನ ವಿದ್ವಾನ್ ಸಿ.ಎನ್. ರಾಘವೇಂದ್ರ ಮತ್ತು ಸಂಗಡಿಗರಿಂದ "ಹರಿಭಜನ್", ಫೆಬ್ರವರಿ 7 : ವಿದ್ವಾನ್ ಶಂಕರ ಶ್ಯಾನುಭಾಗ್ ಮತ್ತು ಸಂಗಡಿಗರಿಂದ "ಹರಿದಾಸ ವೈಭವ", ಫೆಬ್ರವರಿ 8 : ಸುಷ್ಮಾ ಶ್ರೇಯಸ್ ಮತ್ತು ಸಂಗಡಿಗರಿಂದ "ಹರಿದಾಸ ಝೇಂಕಾರ", ಫೆಬ್ರವರಿ 9 : ಪ್ರವಚನ ; ಶ್ರೀ ಆನಂದತೀರ್ಥಾಚಾರ್ಯ ಮಾಳಗಿ ಇವರಿಂದ ವಿಷಯ : ಶ್ರೀ ಪುರಂದರದಾಸರ ಪದಗಳ ವೈಶಿಷ್ಟ್ಯ".
"ಮಧ್ವ ನವರಾತ್ರಿ ಉತ್ಸವ" : ಫೆಬ್ರವರಿ 10 ರಿಂದ 18 ಪ್ರತಿದಿನ ಸಂಜೆ 7-00 ಗಂಟೆಗೆ ಧಾರ್ಮಿಕ ಪ್ರವಚನ ನೀಡುವ ಪ್ರವಚನಕಾರರು : ಮಧ್ವ ಶಾಸ್ತ್ರ ಸಂಪನ್ನರುಗಳಾದ ದ್ವೈಪಾಯನಾಚಾರ್, ವೇಣುಗೋಪಾಲಾಚಾರ್ ಅಗ್ನಿಹೋತ್ರಿ, ಮರುತಾಚಾರ್, ಖೇಡಾ ವೇದವ್ಯಾಸಾಚಾರ್, ಡಾ|| ವಿನಾಯಕಾಚಾರ್, ಅಜಯಾಚಾರ್, ಆದ್ವಾನಿ ವೆಂಕಟೇಶ ಕುಲಕರ್ಣಿ, ವಾಸುದೇವಾಚಾರ್ ಸತ್ತಿಗೇರಿ, ಕಲ್ಯಾ ಶ್ರೀಕಾಂತಾಚಾರ್ಯ ಇವರುಗಳಿಂದ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿದೆ.
ಮೇಲ್ಕಂಡ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಮಠದ ಗೌರವ ಕಾರ್ಯದರ್ಶಿಗಳಾದ ನರಹರಿ ರಾವ್ ವಿನಂತಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ