ಬೆಂಗಳೂರು: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಫೆಬ್ರವರಿ 1, ಗುರುವಾರ ಸಂಜೆ 7-30ಕ್ಕೆ ವಿ|| ಅಮಿತ್ ನಾಡಿಗ್ ಇವರ ಶಿಷ್ಯರಾದ ಚಿ|| ತೇಜಸ್ ರಾಜೇಶ್ ಮತ್ತು ಚಿ|| ಸಮರ್ಥ್ ಚಂದ್ರ ಭಾರಧ್ವಾಜ್ ಇವರಿಂದ "ವೇಣು ವಾದನ". ವಿ|| ರವಿಶಂಕರ್ ಶರ್ಮಾರವರ ಶಿಷ್ಯ ಚಿ|| ಭರತ್ ಚಂದ್ರ ಭಾರಧ್ವಾಜ್ (ಮೃದಂಗ), ವಿ|| ಸುಕನ್ಯಾ ರಾಮಗೋಪಾಲ್ ಶಿಷ್ಯ ಚಿ|| ಸ್ಕಂದ ಮಂಜುನಾಥ್ (ಘಟ). ಈ ಯುವ ಪ್ರತಿಭೆಗಳಿಂದ ಕಾರ್ಯಕ್ರಮ ಏರ್ಪಡಿಸಿದೆ ಎಂದು ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ