ಮಂಗಳೂರು ಗೃಹರಕ್ಷಕದಳದಲ್ಲಿ "ಜಾಗೃತಿ ಅರಿವು ಸಪ್ತಾಹ-2023"

Upayuktha
0


ಮಂಗಳೂರು: ಗೃಹರಕ್ಷಕದಳ ಮತ್ತು ಕೇಂದ್ರ ಕಚೇರಿಯ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿ, ಮೇರಿಹಿಲ್, ಮಂಗಳೂರು ಇಲ್ಲಿ ಬುಧವಾರದಂದು ‘ಜಾಗೃತಿ ಅರಿವು ಸಪ್ತಾಹ-2023’ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧರಾಗಿರುವುದಾಗಿ ಹಾಗೂ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಹೋರಾಟವನ್ನು ಬೆಂಬಲಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಸಮ್ಮುಖದಲ್ಲಿ “ಜಾಗೃತಿ ಅರಿವು ಸಪ್ತಾಹ-2023”ವನ್ನು ಆಚರಿಸಲಾಯಿತು.  


ಭ್ರಷ್ಟಾಚಾರ ನಿರ್ಮೂಲನಾ ಪ್ರತಿಜ್ಞೆಯಲ್ಲಿ ಕಛೇರಿಯ ಪ್ರಥಮ ದರ್ಜಿ ಸಹಾಯಕಿ ಶ್ಯಾಮಲಾ ಎ. ಮತ್ತು ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ ಶೇರಾ ಮಂಗಳೂರು ಘಟಕಾಧಿಕಾರಿ ಹಾಗೂ ಗೃಹರಕ್ಷಕರಾದ ದಿವಾಕರ್, ಸುಲೋಚನ, ಸಂದೇಶ್ ಕುಮಾರ್, ಮಾಲತೇಶ, ಸುಮಂತ್, ಖತೀಜಮ್ಮ, ಭವ್ಯಶ್ರೀ, ಉಷಾ ಶೆಟ್ಟಿ, ನೂರ್ ಜಾನ್, ನಮಿತಾ ಬಾಲಕೃಷ್ಣ, ಕವಿತಾ, ರೇವತಿ ದಿನೇಶ್, ಜಯಂತಿ ಇವರುಗಳು ಪ್ರತಿಜ್ಞೆಯನ್ನು ಮಾಡಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top