ಸಾಹಿತ್ಯ ಹೊಗಳುವವರಿಗಿಂತ ತೆಗಳುವವರು ಬೇಕು : ರಾಜೇಶ್ ಬಿ. ಹೊನ್ನೇನಹಳ್ಳಿ

Upayuktha
0

ಹಾಸನ: ಹಾಸನದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವ ಮನೆ ಮನೆ ಕವಿಗೋಷ್ಠಿಯ 311ನೇ ತಿಂಗಳಕಾರ್ಯಕ್ರಮ ಕವಿ ಎನ್.ಎಲ್. ಚನ್ನೇಗೌಡರ ಮನೆಯಲ್ಲಿ ಭಾನುವಾರ ನಡೆದು ಇವರ ಮೂರು ಕೃತಿಗಳು ಲೋಕಾರ್ಪಣೆಗೊಂಡವು. 


ಕಾವ್ಯ ವಿಮರ್ಶಾಕೃತಿ ನುಡಿತೋರಣ ಬಿಡುಗಡೆ ಮಾಡಿ ಮಾತನಾಡಿದ ಯುವಕವಿ ರಾಜೇಶ್ ಬಿ. ಹೊನ್ನೇನಹಳ್ಳಿ ಸಾಹಿತ್ಯ ವಿಮರ್ಶೆ ಮಾಡುವವರು ಕೇವಲ ಹೊಗಳಿ ಹೊನ್ನ ಶೂಲಕ್ಕೇರಿಸಬಾರದು. ಹೊಗಳುವವರಿಗಿಂತ ತೆಗಳಿ ಕವಿಯನ್ನುತಿದ್ದುವರು ಬೇಕು ಎಂದರು ಆಂಗ್ಲ ಭಾಷಾ ಪ್ರಾಧ್ಯಾಪಕಿ ಎಂ.ಕುಸುಮ ರಾಮಾಯಣದೊಳಗೊಂದಿಷ್ಟು ರಾಮಾಯಣ ತೌಲನಿಕ ಅಧ್ಯಯನ ಕೃತಿ. ಇಲ್ಲಿ ಗೌಡರು ಹಲವಾರು ರಾಮಾಯಣಗಳನ್ನು ವಿಶೇಷವಾಗಿ ವಾಲ್ಮೀಕಿರಾಮಾಯಣ, ಪಂಪರಾಮಾಯಣ, ಶ್ರೀ ರಾಮಯಣದರ್ಶನಂ ಕೃತಿಗಳನ್ನು ತೌಲನಿಕವಾಗಿ ಇಟ್ಟುಕೊಂಡು ಶ್ರೀರಾಮ ಯಾರ ಮಗ? ಸೀತೆ ಯಾರ ಸುತೆ? ಮಂಡೋದರಿದಶರಥನ ಹೆಂಡತಿ..? ಹೀಗೆ ಪ್ರಶ್ನೆಗಳನ್ನು ಎತ್ತಿ ಉತ್ತರದ ಹುಡುಕಾಟ ನಡೆಸಿದ್ದಾರೆ ಎಂದರು. 


ಕವಿ ಪರಮೇಶ್ ಮಡಬಲು ಚನ್ನೇಗೌಡರಕವನ ಸಂಕಲನ ಮೌನದೊಳಗೊಂದು ಮಾತುಕುರಿತು ಮಾತನಾಡಿ ಇಲ್ಲಿನ ಕವಿತೆಗಳು ಓದಿ ಅರ್ಥೈಸಿಕೊಳ್ಳಲು ಸುಲಭವಾಗಿವೆ,ಗಾಯಕರು ಹಾಡಲು ಸರಳವಾಗಿವೆ ಎಂದು ಲಾವಣಿ ಹಾಡಿದರು.  ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಚನ್ನೇಗೌಡರು ಬೇರೆಲ್ಲಾ ಸಾಹಿತ್ಯಕ್ಕಿಂತಕಾವ್ಯಕ್ಷೇತ್ರದಲ್ಲಿಜನಪ್ರಿಯರು. 25 ವರ್ಷದಮನೆ ಮನೆ ಕವಿಗೋಷ್ಠಿಯ ಪ್ರತಿಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಾ ಹೊಸ ಹೊಸ ಕಾವ್ಯರಚಿಸಿ ಓದುತ್ತಾ ಬಂದು ಅವಿನಾಭಾವ ಸಂಬಂಧ ಹೊಂದಿದವರು ಎಂದರು. 


ಕವಿಗೋಷ್ಠಿಯಲ್ಲಿ ದ್ರಾಕ್ಷಾಯಿಣಿ ಮುರುಗನ್, ಸುಶ್ಮಿತ ಎಂ.ಕೆ. ಡಿಂಪುಕುಮಾರ್ ಬಿ.ಆರ್., ಚಂದ್ರೇಗೌಡ ನಾರಮ್ನಳ್ಳಿ ಪದ್ಮಾವತಿ, ಕಮಲಮ್ಮ,  ಹೆಚ್.ಬಿಚೂಡಾಮಣಿ, ಮಲ್ಲೇಶ್ ಜಿ, ರೇಖಾ ಪ್ರಕಾಶ, ಮಾಳೇಟಿರಾ ಸೀತಮ್ಮ ವಿವೇಕ್, ಸಾವಿತ್ರಿ ಬಿ.ಗೌಡ, ಸುಂದರೇಶ್ ಡಿ. ಉಡುವೇರೆ,  ಜಯಂತಿ ಚಂದ್ರಶೇಖರ್, ಸರೋಜಟಿ.ಎಂ. ಭಾವನ ಪಿ.ಗೌಡ, ಗಿರೀಜ ನಿರ್ವಾಣಿ, ಲಕ್ಷ್ಮೀದೇವಿ ದಾಸಪ್ಪ, ಪ್ರಜ್ವಲ್ ಕೆ.ಎಂ. ವನಜಾ ಸುರೇಶ್, ಪ್ರಣತಿಪಿ.ಹರಿತ್ಸಾಕವಿತೆ ವಾಚಿಸಿದರು. ದೇವಿರಮ್ಮ, ಕುಮಾರಸ್ವಾಮಿಯು.ಎ. ಉಡುವೇರೆ, ಧನಲಕ್ಷ್ಮಿ ಗೊರೂರು. ದಿಬ್ಬೂರು ರಮೇಶ್ ಹಾಡುಗಳಿಂದ ರಂಜಿಸಿದರು. ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬರಾಳು ಶಿವರಾಮ, ಪರಮೇಶ್ ಮಡಬಲು ಮತ್ತುರಾಜ್ಯ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಜೆ.ಓ.ಮಹಾಂತಪ್ಪರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಹಿತಿಗಳು ಅಪ್ಪಾಜಿ ಗೌಡ ಟಿ.ಹೆಚ್. ಸುಮಾರಮೇಶ್, ರಾಜೇಶ್ವರಿ ಹುಲ್ಲೇನಹಳ್ಳಿ, ಪದ್ಮಶರ್ಮ, ಸಮುದ್ರವಳ್ಳಿ ವಾಸು, ಜವರೇಗೌಡಎನ್.ಎಲ್. ಇದ್ದರು.312ನೇ ತಿಂಗಳ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮ ಡಿಸೆಂಬರ್ 3ರ ಭಾನುವಾರ ಜೆ.ಓ.ಮಹಾಂತಪ್ಪರವರ ಪ್ರಾಯೋಜನೆಯಲ್ಲಿ ನಡೆಯುವುದಾಗಿ ಸಂಚಾಲಕರು ಗೊರೂರು ಅನಂತರಾಜು ಇದೇ ಸಂದರ್ಭ ಪ್ರಕಟಿಸಿದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top