ಉಜಿರೆ : ಡಿಜಿಟಲ್ ಮಾಧ್ಯಮದಲ್ಲಿನ ವಿಪುಲ ಅವಕಾಶಗಳಿಂದ ಮುಂದಿನ ದಿನಗಳಲ್ಲಿ ಕಂಟೆಂಟ್ ಕ್ರಿಯೆಟರ್ಸ್ ಗಳಿಗೆ ಉತ್ತಮ ಭವಿಷ್ಯವಿದೆ ಎಂದು ಡೇ ಟುಡೇ ನ್ಯೂಸ್ ಆಪ್ ಮುಖ್ಯ ಸಂಪಾದಕ ಮತ್ತು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸುರೇಶ್ ಪುದುವೆಟ್ಟು ಮಾತನಾಡಿದರು.
ಇಲ್ಲಿನ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಪದವಿ ಅಧ್ಯಯನ ವಿಭಾಗಗಳು ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಹಯೋಗದಲ್ಲಿ ಸ್ಥಳೀಯ ಮಾಧ್ಯಮ : ಕಾರ್ಯನಿರ್ವಹಣೆ ಮತ್ತು ಸುಸ್ಥಿರತೆ ಕುರಿತು ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರ ಗೋಷ್ಠಿಯಲ್ಲಿ 'ಡಿಜಿಟಲ್ ಯುಗದಲ್ಲಿ ಸಣ್ಣ ಸುದ್ದಿ' ವಿಷಯದ ಕುರಿತು ವಿಚಾರಗಳನ್ನು ಪ್ರಸ್ತುತಪಡಿಸಿದರು.
ಅರ್ಥವತ್ತಾದ ಕಂಟೆಂಟ್ಗಳಿಗೆ ಯಾವತ್ತೂ ಆದ್ಯತೆ ಇದ್ದೇ ಇರುತ್ತದೆ. ಉದ್ಯಮ ಜಗತ್ತು ಸೇರಿದಂತೆ ವಿವಿಧ ವಲಯಗಳು ವೃತ್ತಿಪರ ಸಾಮಥ್ರ್ಯವುಳ್ಳ ಕಂಟೆಂಟ್ ಬರಹಗಾರರ ನಿರೀಕ್ಷೆಯಲ್ಲಿವೆ. ಅಂಥವರಿಗೆ ವಿಫುಲ ಅವಕಾಶಗಳೂ ಇವೆ. ಆದಾಗ್ಯೂ ಗುಣಮಟ್ಟದ ಕಂಟೆಂಟ್ ಬರಹಗಾರರ ಕೊರತೆ ಇದೆ ಎಂದರು.
ಸುಳ್ಳು ವಿವರಗಳ ಕಾರಣದಿಂದ ಸೋಷಿಯಲ್ ಮೀಡಿಯಾಗಳು ಕೆಲವು ವೇದಿಕೆಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಅಧಿಕೃತ ಮಾಹಿತಿ ನೀಡುವ ಸುದ್ದಿವೇದಿಕೆಗಳ ಅವಶ್ಯಕತೆ ಇದೆ. ಈ ದೃಷ್ಟಿಯಿಂದ ಸಂಕ್ಷಿಪ್ತ ಮಾಹಿತಿ ನೀಡುವ ನ್ಯೂಸ್ ಆಪ್ಗಳು ಮನ್ನಣೆ ಪಡೆಯುತ್ತಿವೆ ಎಂದು ಹೇಳಿದರು.
ಮಾಧ್ಯಮ ಬಳಕೆದಾರ ಪ್ರವೃತ್ತಿಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಓದುವ ವಿಧಾನ ಬದಲಾಗಿದೆ. ಟಿವಿಯನ್ನು ನೋಡುವಿಕೆಯ ಪ್ರಮಾಣ ಕಡಿಮೆಯಾಗಿದೆ. ಹೊಸ ಮಾಧ್ಯಮಗಳು ಈ ಕಾರಣಕ್ಕಾಗಿಯೇ ಆದ್ಯತೆ ಪಡೆದುಕೊಳ್ಳುತ್ತಿವೆ. ಈ ದೃಷ್ಟಿಯಿಂದ ವೃತ್ತಿಪರತೆಯೊಂದಿಗಿನ ಕಂಟೆಂಟ್ ಬರಹಗಾರರಿಗೆ ಅವಕಾಶಗಳ ಸಾಧ್ಯತೆಗಳು ವಿಸ್ತರಿಸಲ್ಪಟ್ಟಿವೆ ಎಂದರು. ಭವಿಷ್ಯದಲ್ಲಿ ವಿಷಯಾಧಾರಿತ ಬರಹಗಾರರಿಗೆ ಹೆಚ್ಚು ಆದ್ಯತೆ ಸಿಗಲಿದೆ ಇದರ ಬಗ್ಗೆ ಬರಹಗಾರರು ಜ್ಞಾನಾರ್ಜನೆಯ ಕಡೆ ತಮ್ಮನ್ನು ತಾವು ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಥಳೀಯ ಮಾಧ್ಯಮಗಳ ದೃಷ್ಟಿಕೋನ ಮತ್ತು ಸವಾಲು ವಿಷಯದ ಕುರಿತು ಉದಯವಾಣಿ ಮುಖ್ಯ ವರದಿಗಾರ ವೇಣು ವಿನೋದ್ ಕೆ. ಎಸ್ ಮಾತನಾಡಿದರು. ಸ್ಥಳೀಯ ಸಮಸ್ಯೆಗಳ ಕುರಿತು ಸ್ಥಳೀಯ ಮಾಧ್ಯಮಗಳ ಕಾರ್ಯಪರತೆ ಶ್ಲಾಘನೀಯ ಎಂದು ತಿಳಿಸಿದರು.
ಸ್ಥಳೀಯ ಸುದ್ದಿ ಮಾಧ್ಯಮಗಳು ಹೊಸ ಹೊಸ ಪ್ರಯೋಗ, ಜನ ಸಮುದಾಯದ ನಡುವೆ ಬೆರೆತು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತವೆ. ಈ ಬರುವ ದಿನಗಳಲ್ಲಿ ಡಿಜಿಟಲ್ ಮಾಧ್ಯಮದಿಂದ ಸ್ಥಳೀಯ ಸುದ್ದಿಗಳು ಹೆಚ್ಚು ಮಹತ್ವ ಪಡೆದುಕೊಳ್ಳಲಿವೆ ಎಂದರು. ವಿದ್ಯಾರ್ಥಿಗಳಾದ ಅಮಿತಾ ಮತ್ತು ಸೋಮೇಶ್ವರ ಗುರುಮಠ ಗೋಷ್ಠಿಯನ್ನು ನಿರ್ವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ