ಧರ್ಮತ್ತಡ್ಕ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳವರು ನವರಾತ್ರಿಯ ಪರ್ವಕಾಲದಲ್ಲಿ ಶ್ರೀಕರಾರ್ಚಿತ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆಯನ್ನು ನವರಾತ್ರ ನಮಸ್ಯಾ ಎಂಬ ಅಭಿದಾನದೊಂದಿಗೆ ನಡೆಸುತ್ತಿದ್ದು, ಆರಂಭದ ದಿನವಾದ ಭಾನುವಾರದಂದು ಅಪರಾಹ್ನ 2ರಿಂದ ನಡೆದ ಮಕ್ಕಳ ನೃತ್ಯ ಭಜನಾ ಸೇವೆಯಲ್ಲಿ ಗುಂಪೆ ವಲಯದ ವಿದ್ಯಾರ್ಥಿಗಳು ಭಾಗವಹಿಸಿ ಶ್ರೀಗುರುಗಳ ಕೃಪೆಗೆ ಪಾತ್ರರಾದರು.
ನೃತ್ಯ ಭಜನಾ ತಂಡದ ವಿದ್ಯಾರ್ಥಿಗಳು: ಚೇತನ್ ಎಡಕ್ಕಾನ, ನೂತನ್ ಎಡಕ್ಕಾನ, ಆತ್ಮಿಕಾ ಗುಂಪೆ, ಶ್ರುತಿ ಚೆಕ್ಕೆಮನೆ, ವಿಶ್ರುತ್ ಶರ್ಮ ಪಯ, ಅಪೂರ್ವ ಚಾರುಮುಗೇರು, ಅಪೇಕ್ಷ ಚಾರುಮುಗೇರು, ಆರಾಧ್ಯ ಗುಂಪೆ, ಸಾತ್ವಿಕ್ ಗುಂಪೆ, ಶ್ರೀರಾಮ ಶರ್ಮ ಎಡಕ್ಕಾನ, ಶ್ರೀಸುಧಾಮ ಶರ್ಮ ಎಡಕ್ಕಾನ, ಅನೂಪ್ ಕೃಷ್ಣ ಬಾಯಾಡಿ, ಸಾರ್ಥಕ ಕೃಷ್ಣ ಚೆಕ್ಕೆಮನೆ, ಅಭಿನವ ನಾರಾಯಣ ಗುಂಪೆ.
ಮಹಾಲಿಂಗ ಭಟ್ ನೇರೋಳು, ರಾಮಚಂದ್ರ ಭಟ್ ನೇರೋಳು, ಶಂಕರ ನಾರಾಯಣ ಭಟ್ ನೇರೋಳು, ರೇವತಿ ಕಕ್ವೆ, ಸುಷ್ಮಾ ಬೆಜಪ್ಪೆ, ಕಾವೇರಿ ಅಮ್ಮ ಗುಂಪೆ ಗಾಯನದಲ್ಲಿ ಸಹಕರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ