ಬೆಂಗಳೂರು: ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ನಗರ ಜಿಲ್ಲಾ ಘಟಕ ಮತ್ತು ಎಂ.ಎಲ್.ಎ ಪದವಿಪೂರ್ವ ಕಾಲೇಜು, ಮಲ್ಲೇಶ್ವರಂ 15ನೇ ಕ್ರಾಸ್ , ಬೆಂಗಳೂರು ಸಂಯುಕ್ತಾಶ್ರಯದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ಪ್ರಯುಕ್ತ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡುತ್ತ ಭಾರತೀಯ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಸ್ತ್ರೀ ಪೋಷಣೆ ಮತ್ತು ಸಂರಕ್ಷಣೆಯೇ ಬಹುದೊಡ್ಡ ಸಮಸ್ಯೆಯಾಗಿದೆ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ನಾವು ದಿನನಿತ್ಯ ನೋಡುವ, ಓದುವ ಸುದ್ದಿಗಳಲ್ಲಿ ಬಹಳಷ್ಟು ಇದಕ್ಕೆ ಸಂಬಂಧಪಟ್ಟಂತಹ ಸುದ್ದಿಗಳೇ ಆಗಿರುತ್ತದೆ. ಸ್ತ್ರೀ ಶೋಷಣೆಯ ಹಲವಾರು ಮುಖಗಳು ಆಘಾತಕಾರಿ ಎನಿಸುವಷ್ಟು, ನಾಗರೀಕ ಸಮಾಜ ತಲೆತಗ್ಗಿಸುವಷ್ಟು ವರದಿಯಾಗುತ್ತವೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರು ಮತ್ತು ಮಹಿಳೆಯರ ಪಾತ್ರ ಹಿರಿದಾದದು. ಸ್ತ್ರೀಯು ಆತ್ಮ ತ್ಯಾಗದ ಪ್ರತಿರೂಪವಾಗಿದ್ದಾಳೆ. ಸ್ತ್ರೀಯರೂ ನಾಗರೀಕ ಕರ್ತವ್ಯಗಳನ್ನು ನಿರ್ವಹಿಸುವ ಅರ್ಹತೆಯುಳ್ಳವರಾಗಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳ ಪೋಷಣೆ, ಸಂರಕ್ಷಣೆ ಪಾಲಕರಿಗೆ ಒಂದು ಸವಾಲಾಗಿದೆ. ಈ ಸಮಸ್ಯೆಗೆ ಸೂಕ್ತ ಉತ್ತರಗಳು ಗಾಂಧೀ ವಿಚಾರಧಾರೆಗಳಲ್ಲಿ, ಚಿಂತನೆಗಳಲ್ಲಿವೆ. ಸ್ತ್ರೀಯರಿಗೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳನ್ನು ಗಾಂಧೀಜಿಯವರು ಎದುರಿಸಿದ ರೀತಿ, ಪರಿಹಾರ ಕಂಡುಕೊಂಡ ಬಗ್ಗೆ, ಪರಿಶೀಲಿಸಿದ ವಿಧಾನಗಳು ನಮಗೆ ಇಂದಿಗೂ ಮಾದರಿಯಾಗಬಲ್ಲವು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .
ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ. ಎಚ್. ಎಸ್.ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ "ಸಾಕ್ಷರತೆಯ ಮಹತ್ವವನ್ನು ಎಲ್ಲರಿಗೂ ಅರಿವು ಮೂಡಿಸಲು ಯುನೆಸ್ಕೋ ಘೋಷಣೆ ಅನ್ವಯ 1967 ಸೆಪ್ಟೆಂಬರ್ 8 ರಿಂದ ಆಚರಣೆಗೆ ಬಂದಿತು. ಭಾರತ ಸ್ವತಂತ್ರ್ಯ ವಾದಾಗ ಇದ್ದ ಶೇ.18 ರ ಸಾಕ್ಷರತಾ ಪ್ರಮಾಣ ಇದೀಗ ಶೇ.77 ಕ್ಕೆ ಏರಿದೆ. ವಿಶ್ವದ ವಿವಿಧ ದೇಶಗಳ ಸಾಕ್ಷರತೆ ಕನಿಷ್ಠ 22.31 ( ಛಾಡ್) ರಿಂದ 99.99 ( ಉಜ್ಬೇಕಿಸ್ತಾನ್ ) ನವರೆಗೆ ಹಬ್ಬಿದೆ. ಅನಕ್ಷರತೆ - ಬಡತನ - ಅನಾರೋಗ್ಯ ಒಂದಕ್ಕೊಂದು ಪೂರಕ. ಅನಕ್ಷರಸ್ಥರ ಹೊಣೆ ಸಾಕ್ಷರರದ್ದು ಅನ್ನುವ ಕರ್ತವ್ಯ ಪ್ರಜ್ಞೆ ನಮ್ಮದಾಗಬೇಕು" ಎಂದು ತಿಳಿಸಿದರು. ಗೌರವ ಕಾರ್ಯದರ್ಶಿ, ಡಾ. ಯ. ಚಿ. ದೊಡ್ಡಯ್ಯ , ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿಗಳಿಂದ ದಂಡಿ ಯಾತ್ರೆ , ಚಂಪಾರಣ್ ಸತ್ಯಾಗ್ರಹ , ಚಲೇಜಾವ್ ಚಳುವಳಿ ಈಸೂರು ಸತ್ಯಾಗ್ರಹ , ವಿದುರಾಶ್ವತ್ಥ ಘಟನೆ, ಶಿವಪುರ ಧ್ವಜ ಸತ್ಯಾಗ್ರಹ ಈ ವಿಚಾರಗಳ ಪ್ರಸ್ತುತಿ ನಡೆಯಿತು ಬೆಂ.ನ.ಜಿ. , ಕ .ಸ ಮಂ. ಗೌ. ಅಧ್ಯಕ್ಷ ಸುರೇಶ್ ಕಲಘಟಗಿ ,ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ , ಕಾರ್ಯದರ್ಶಿಸುಮ ಚಂದ್ರಶೇಖರ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ