ರಾಮಾಯಣ ಹಕ್ಕಿನೋಟ-35: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0
ಶ್ರೀರಾಮಾಯನಮ:


"ತ್ರಿಜಟ ಗಾಥಾ"

ತ್ರಿಜಟನೆಂಬ ವೃದ್ಧವಿಪ್ರ ಬಡವನಿದ್ದನು|

ತರುಣಿ ಪತ್ನಿ ಒಡಲು ತುಂಬ ಮಕ್ಕಳಿದ್ದರು||

ಉಂಛವೃತ್ತಿಯಲ್ಲಿ ಕಾಡು ಮೇಡು ತಿರುಗುವಾತನಿಗೆ|

ಕೊಡಲಿ ಕೊಕ್ಕೆ ಗುದ್ದಲಿಗಳೇ

ನಿಜದ ಐಸಿರಿ||


ರಾಮ ಗೈವ ದಾನ ವಿಷಯ ಕೇಳಿ ಸತಿಯು ತನ್ನ ಪತಿಗೆ|

ನೀವು ಹೋಗಿ ಬೇಡಿಕೊಳ್ಳಿ ಕೊಡುವನವನು ನಿಶ್ಚಿತ||

ಮಹರ್ಷಿಗಳ ತೇಜದಲ್ಲಿ ಬೆಳಗುತಿರುವ ಬಡವ ತ್ರಿಜಟ|

ಚಿಂದಿ ಬಟ್ಟೆ ತೊಟ್ಟು- ಹೊದೆದುಕೊಂಡು  ಬಂದನು||

 ರಾಮನರಮನೆಯನು ತಲುಪಿ ರಾಮನಲ್ಲಿ ಪ್ರಾರ್ಥಿಸಿದನು|

ಬಡವನೆನ್ನ ಬಡತನವನು ನೀಗು ಎಂದನು||

ಹಾಸ್ಯಕಾಗಿ ರಾಮನೆಂದ ಅಲ್ಲಿ ಇಹವು ದನಗಳೆನಿತೋ|

ನಿನ್ನ ಕೈಯ ದಂಡವನ್ನು ಎಲ್ಲಿ ತನಕ ಎಸೆವೆ ನೀನು|

ಅಲ್ಲಿ ತನಕವಿರುವ ಗೋವ ನಿನಗೆ ನೀಡುವೆ||

ಎನಲು ವೃದ್ಧ ಬಟ್ಟೆಯನ್ನು ಸೊಂಟಕಾಗ ಗಟ್ಟಿ ಬಿಗಿದು|

ದಂಡವನ್ನು ಗರಗರನೆ ತಿರುಗಿಸೆಸೆದನು||

ಶಕ್ತಿ ಮೀರಿ ಎಸೆದ ದಂಡ ಸರಯೂ ನದಿಯ ದಾಟಿ ಆಚೆ|

ಸಾವಿರಾರು ಗೋವುಗಳ ಮಾಳ ತಲುಪಿತು||

ಅಲ್ಲೆ ಇದ್ದ ಎತ್ತಿನ ಬಳಿ ಬಿದ್ದ ದಂಡ ಮಾನವಾಗೆ|

ಸಾವಿರಾರು ಗೋವುಗಳನು ರಾಮನಿತ್ತನು||

ಗೋವುಗಳನು ಸಾಕಲೆಂದು ಗೋವಳಿಗರ ನೇಮಿಸುತ|

ಬಡವ ವಿಪ್ರನಾಶ್ರಮಕೆ ಕಳುಹಿಕೊಟ್ಟನು||

ನಿನ್ನ ಶಕ್ತಿ ಪರೀಕ್ಷೆಯನ್ನು ಗೈದೆನೆಂದು ಮುನಿಯದಿರು|

ನನ್ನಲಿರುವ ಸಂಪದವ ನೀನು ಪಡೆದುಕೋ||

ನನ್ನ ಹರಸಿ ಬೀಳುಕೊಡು ವನಕೆ ನಾನು ಹೋಗಿ ಬರುವೆ|

ಸುಖವು ಇರಲಿ ನಿನಗೆ ನಿನ್ನ ಸತಿಗೆ ಸುತರಿಗೆ ||


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top