ಮಂಗಳೂರು: ಜನರು ಅಕ್ಷರಸ್ಥರಾದಲ್ಲಿ ತಮ್ಮ ಜೀವನದಲ್ಲಿ ಪ್ರತಿಯೊಂದು ವ್ಯವಹಾರದ ಬಗ್ಗೆಯೂ ಮೋಸ ಹೋಗದೆ ಇರಲು ಸಾಧ್ಯವಿದೆ. ಹೀಗಾಗಿ ಸಾಕ್ಷರತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದರು.
ಅವರು ವಿಶ್ವ ಸಾಕ್ಷರತಾ ದಿನಾಚರಣೆ-2023 ಕಾರ್ಯಕ್ರಮವನ್ನು ನಗರದ ಡಾ.ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಜನ ಶಿಕ್ಷಣ ಟ್ರಸ್ಟ್ ಸಾವಿರ ಗ್ರಾಮ ಪಂಚಾಯಿತ್ಗಳಲ್ಲಿ ಸಂಪೂರ್ಣವಾಗಿ ಅಕ್ಷರಭ್ಯಾಸದ ಅನುಷ್ಟಾನವನ್ನು ಸ್ಥಳೀಯ ಗ್ರಾಮ ಪಂಚಾಯತ್ ಮೂಲಕ ಮಾಡುವುದರೊಂದಿಗೆ ಯಶಸ್ವಿಯಾಗಬೇಕು ಎಂದರು.
ಜಿಲ್ಲೆಯಲ್ಲಿ ಅಕ್ಷರದ ಕೊರತೆ ಇದ್ದರೂ ಸಹ ಅನೇಕ ಜನರು ದೊಡ್ಡ ದೊಡ್ಡ ಸಾಧನೆ ಮಾಡಿ ಉನ್ನತ ಮಟ್ಟಕ್ಕೆ ಹೋಗಿರುವುದು ಕಾಣುತ್ತೇವೆ. ವಸ್ತು ಸ್ಥಿತಿಯಲ್ಲಿ ಅವಲೋಕನ ಮಾಡಿದಾಗ ಅನೇಕ ಜನರಿಗೆ ಸಹಾಯ ಮಾಡಿದ್ದು ಕಂಡಿದ್ದೇವೆ ಅಕ್ಷರದ ಜೊತೆಗೆ ಅನುಭವದ ಜ್ಞಾನವು ಮುಖ್ಯ ಎಂದು ಹೇಳಿದರು.
ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಶೀನ ಶೆಟ್ಟಿ ಮಾತನಾಡಿ ,ಹೆಚ್ಚಿನ ಜನರು ಅಕ್ಷರ ಅಭ್ಯಾಸವನ್ನು ಮಾಡಲು ಉತ್ಸಾಹಕರಾಗಿ ಅಕ್ಷರ ಜ್ಞಾನವನ್ನು ಹೊಂದಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬರಿಗೂ ಅಕ್ಷರ ಅಭ್ಯಾಸ ಮಾಡಿಸಿ ಸಾಕ್ಷರತಾ ಜಿಲ್ಲೆಯನ್ನಾಗಿಸಬೇಕು ಎಂದರು. ನವಸಾಕ್ಷರಸ್ಥರು ಅನುಭವವನ್ನು ತಿಳಿಸಿದರು.
1990ರಲ್ಲಿ ಸಾಕ್ಷರತೆಗೆ ಸೇರಿದನು ಗೋಳಿಕಟ್ಟೆ ಸಾಕ್ಷರತೆಗೆ ಕೇಂದ್ರವಾಗಿತ್ತು. ಕುಲಶೇಖರದಲ್ಲಿ 3 ಸಲ ಎಸ್ಎಲ್ಸಿ ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದೇನೆ. ಸಾಕ್ಷರತೆಯನ್ನು ಪಡೆದ ನಂತರ ಅನೇಕ ಬೀದಿ ನಾಟಕಗಳಲಿ ಭಾಗವಹಿಸಿದ್ದೇನೆ ಈಗ ಸುಬ್ರಹ್ಮಣ್ಯದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ.
- ನಾರಾಯಣ ಗೋಳಿಕಟ್ಟೆ
4 ನೇ ತರಗತಿ ತನಕ ನನ್ನ ವಿದ್ಯಾಭ್ಯಾಸ ನಡೆಯಿತು. ಮುಂದೆ ಕೂಲಿ ಮಾಡಿ ಜೀವನ ಮಾಡಿ ಮಾಡುತ್ತಿದ್ದೆ. 1990-91ರಲ್ಲಿ ಸಾಕ್ಷರತೆಯಿಂದ ನನ್ನ ಮನೆಯಲ್ಲಿ ಹೆಂಡತಿ ಜೊತೆಗೆ 24 ಜನಕ್ಕೆ ಸಾಕ್ಷರತೆ ಮಾಡಿರುತ್ತೇನೆ.
-ಮಹಮ್ಮದ್ ಮೂಡುಶೆಡ್ಡೆ
ನಾಲ್ಕನೇ ತರಗತಿ ತನಕ ಅಭ್ಯಾಸವನ್ನು ಮಾಡಿ ನಾಲ್ಕು ಗೋಡೆಯ ಮಧ್ಯೆ ಜೀವನವನ್ನು ನಡೆಸುತ್ತಿದ್ದೆ. 2ಕ್ಕೂ ಅಧಿಕ ಜನರಿಗೆ ಅಕ್ಷರ ಅಭ್ಯಾಸವನ್ನು ಮಾಡಿಸಿ ಈಗ ಬಸ್ಸಿನಲ್ಲಿ ತೆರಳಲು ಸ್ವಸಹಾಯ ಸಂಘವನ್ನು ರಚಿಸಲು ಸಹಾಯಕವಾಗಿದೆ. ಸ್ವಉದ್ಯೋಗಕ್ಕಾಗಿ ಫಿನೈಲ್, ಸೋಪು, ಸರ್ಫ್ ಮೊದಲಾದವುಗಳ ತಯಾರಿಕೆ ನಡೆಸಿ ಸ್ವಾವಲಂಬಿ ಜೀವನ ಮಾಡಲು ಸಹಾಯಕವಾಗಿದೆ.
-ಪಾತುಕುಂಞಿ
ಕಾರ್ಯಕ್ರಮದಲ್ಲಿ ವಯಸ್ಕರ ಶಿಕ್ಷಣಧಿಕಾರಿ ಲೋಕೇಶ್, ದಕ್ಷಿಣ ವಲಯದ ಶಿಕ್ಷಣಧಿಕಾರಿ ಈಶ್ವರ್, ಬಿರ್ ಸಿ ಕೊಡಿನೆಟರ್ ಪ್ರಶಾಂತ್, ಉಸ್ಮಾನ್, ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ಭಾರತ್, ತಾಲೂಕು ಪಂಚಾಯತ್ನ ಸಹಾಯಕ ನಿರ್ದೇಶಕರಾದ ಅಬುಬಕರ್ ಜಿಲ್ಲಾ ಸರ್ವ ಶಿಕ್ಷಣ ಅಭಿಯಾನ ದ ಅಧಿಕಾರಿಯಾದ ಸುಮಂಗಲ, ಹಾಗೂ ಮತ್ತಿತರರು ಭಾಗವಹಿಸಿದ್ದರು.
ಸಾಕ್ಷರತೆಯನ್ನು ಪಡೆದವರಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ನೀಡಲಾಯಿತು. ಸಾಕ್ಷರತೆಯ ಗೀತೆಯನ್ನು ಹಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಯೆಟ್ ನ ಪ್ರಾಂಶುಪಾಲರಾದ ರಾಜಲಕ್ಷ್ಮಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರೆ ಉತ್ತರ ವಲಯದ ಸಮನ್ವಯ ಶಿಕ್ಷಣಾಧಿಕಾರಿ ಉಸ್ಮಾನ್ ಜಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ