ಪ್ರಶ್ನೆಯು ಜ್ಞಾನದ ಕೀಲಿಕೈ.ಅರಿಯುವ ಕುತೂಹಲವನ್ನು, ಆಸಕ್ತಿಯನ್ನು, ಪ್ರಶ್ನಿಸುವವನ ಧಾರಣಾ ಸಾಮರ್ಥ್ಯವನ್ನು.. ಪ್ರಶೆಯು ತೋರಿಸುತ್ತದೆ.ರಾಮಾಯಣದಲ್ಲಿ ಅದರಲ್ಲೂ ವಿಶೇಷವಾಗಿ ರಾಮ-ವಿಶ್ವಾಮಿತ್ರರ ಸಂಭಾಷಣಾ ಸಂದರ್ಭಗಳಲ್ಲಿ ನಾವಿದನ್ನು ಧಾರಾಳವಾಗಿ ಕಾಣಬಹುದು.ಇದು ವಾಲ್ಮೀಕಿ ಮಹರ್ಷಿಗಳ ಕತೆ ಹೇಳುವ ಜಾಣ ಶೈಲಿಯೂ ಹೌದು.ಇದೊಂದು ಏಕಪಾತ್ರಾಭಿನಯ!
ವಿಶ್ವಾಮಿತ್ರರ ಯಜ್ಞ ಪರಿಸಮಾಪ್ತಿಯಾದ ಮರುದಿನ ಬೆಳಗಿನ ಕರ್ಮಗಳನ್ನು ಮುಗಿಸಿದ ರಾಮ ಲಕ್ಷ್ಮಣರು ವಿಶ್ವಾಮಿತ್ರರಲ್ಲಿ- ಇನ್ನು ನಮ್ಮಿಂದೇನಾಗಬೇಕು ಅಪ್ಪಣೆಯಾಗಲಿ ಎಂದು ಪ್ರಾರ್ಥಿಸಿದರು.ಆಗ ಅಲ್ಲಿದ್ದ ಮುನಿಗಳು ರಾಮಲಕ್ಷ್ಮಣರಲ್ಲಿ-ನಾವು ಮಿಥಿಲೆಗೆ ಹೋಗುತ್ತಿದ್ದೇವೆ.ಅಲ್ಲಿ ಜನಕರಾಜನು ಯಜ್ಞವನ್ನು ಮಾಡುತ್ತಿದ್ದಾನೆ.ಆತನಲ್ಲಿ ಅಪೂರ್ವವಾದ ಶಿವಧನುಸ್ಸು ಇದೆ.ಅದನ್ನೂ ನಾವು ನೋಡಿ ಧನ್ಯರಾಗಬೇಕೆಂದಿದ್ದೇವೆ.ನೀವೂ ಬನ್ನಿ ಎಂದು ಆಮಂತ್ರಿಸಿದರು.ವಿಶ್ವಾಮಿತ್ರರೂ ಇದಕ್ಕೆ ಒಪ್ಪಿ ಮುನಿಗಡಣದೊಂದಿಗೆ ಮಿಥಿಲೆಯತ್ತ ಪಯಣಿಸಿದರು.
ಹೋದಲ್ಲೆಲ್ಲಾ,ನಿಂದಲ್ಲೆಲ್ಲಾ ಎಂಬಂತೆ ಇಲ್ಲಿನ ವಿಶೇಷವೇನು?ಇದು ಯಾಕೆ ಹೀಗೆ...ಮುಂತಾದ ಪ್ರಶ್ನೆಗಳನ್ನು ಕೇಳಿದಾಗ ವಿಶ್ವಾಮಿತ್ರರು ರಾಮನ ಕುತೂಹಲವನ್ನು ತಣಿಸಲು ವಿಸ್ತಾರವಾಗಿ ಉತ್ತರಗಳನ್ನು ನೀಡುತ್ತಾ ಹೋದರು.ಅದರ ಫಲವೇ-
. ಬ್ರಹ್ಮದತ್ತನ ಕತೆ
. ವಿಶ್ವಾಮಿತ್ರರ ಜನ್ಮ
. ಗಂಗೆ ಉಮೆಯರ ಜನ್ಮ ವೃತ್ತಾಂತ
. ಕಾರ್ತಿಕೇಯನ ಕತೆ
.ಸಗರನ ಅಶ್ವಮೇಧ ಯಾಗದ ಕತೆ
.ಗಂಗಾವತರಣದ ಕತೆ
.ಸಮುದ್ರಮಥನ.. ಹೀಗೆ ಕತೆಗಳ ಗಂಗಾಪ್ರವಾಹವೇ ಹರಿಯಿತು.ರಾಮಲಕ್ಷ್ಮಣರೊಂದಿಗೆ ಅವರೊಡನಿದ್ದ ಮುನಿಗಳೂ ಇದರಲ್ಲಿ ಮಿಂದು ಪಾವನರಾದರು.
ರಾಮಾಯಣದ ಮುಂದುವರಿಕೆಯ ದೃಷ್ಟಿಯಿಂದ ಗಂಗಾವತರಣದ ಕತೆ ಮುಖ್ಯವಾದುದು.ಗಂಗೆಯಿಲ್ಲದಿರೆ.....
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ