ಪುತ್ತೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ (ರಿ) ಪುತ್ತೂರು, ಶಾಲಾ ಶಿಕ್ಷಣ ಇಲಾಖೆ ಪುತ್ತೂರು, ಅನಿಕೇತನ ಎಜುಕೇಶನಲ್ ಟ್ರಸ್ಟ್ (ರಿ) ಪುತ್ತೂರು ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆ ಘಟಕ, ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇವರ ಸಂಯುಕ್ತ ಸಹಯೋಗದೊಂದಿಗೆ ‘ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ – 2023’ ಇದರ ಅಂಗವಾಗಿ ಆಯ್ದ ಶಾಲೆಗಳಲ್ಲಿ ಸರಣಿ ಮಾಹಿತಿ ಸಪ್ತಾಹ ನಡೆಯುತ್ತಿದ್ದು, ಸುದಾನ ವಸತಿ ಶಾಲೆಯಲ್ಲಿ ಆಗಸ್ಟ್ 2ರಂದು ಕಾರ್ಯಗಾರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಕೀಲೆ ಸ್ವಾತಿ ಜೆ ರೈ ಯವರು “ಮಾನವ ಕಳ್ಳಸಾಗಾಣಿಕೆ ಎಂದರೇನು? ಹೇಗೆ ನಡೆಯುತ್ತದೆ? ತಡೆಯುವುದು ಹೇಗೆ? ಎನ್ನುವುದನ್ನು ವಿವರಿಸಿದರು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಅನಿಕೇತನ ಎಜುಕೇಶನಲ್ ಟ್ರಸ್ಟ್ ನ ಸಂಚಾಲಕರಾದ ವಕೀಲರು ಶ್ರೀ ಕೃಷ್ಣ ಪ್ರಸಾದ್ ನಡ್ಸಾರ್ ರವರು ಮಾತನಾಡುತ್ತಾ “ವಿದ್ಯಾರ್ಥಿಗಳು ಹೊಣೆಗಾರಿಕೆಗಳ ಬಗ್ಗೆ ಜಾಗೃತರಾಗಬೇಕು, ಸದವಕಾಶಗಳನ್ನು ಗುರುತಿಸಿ ಚೆನ್ನಾಗಿ ಬಳಸಿಕೊಳ್ಳಬೇಕು. ಆಗ ಸಮಾಜವು ಸಶಕ್ತವಾಗುತ್ತದೆ. ಎಂದು ಅಭಿಪ್ರಾಯ ಪಟ್ಟರು.
ಪುತ್ತೂರಿನ ಫಿಲೊಮಿನಾ ಕಾಲೇಜಿನ ಪ್ರಾಧ್ಯಾಪಕಿ ಭಾರತಿ. ಎಸ್. ರೈ ಯವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಸುದಾನ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ರವರು ಮಾತನಾಡುತ್ತಾ “ಮಾನವ ಕಳ್ಳ ಸಾಗಾಣೆಯ ಪಿಡುಗು ಬಹಳ ಕಾಲದಿಂದ ಸಮಾಜವನ್ನು ಕಾಡುತ್ತಿದೆ. ಯುವ ಜನತೆ ಇದರ ಬಗೆಗೆ ಜಾಗೃತರಾಗಬೇಕು. ಹಾಗಾದರೆ ಮಾತ್ರ ಇದನ್ನು ತಡೆಯಬಹುದು ಎಂದು ನುಡಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರತ್ನಾಕುಮಾರಿಯವರು ಶುಭಾಶಂಸನೆಗೈದರು. ಪುತ್ತೂರು ವಕೀಲರ ಸಂಘಧ ಜೊತೆ ಕಾರ್ಯದರ್ಶಿಗಳಾದ ವಕೀಲೆ ಸೀಮಾ ನಾಗರಾಜ್, ವಕೀಲೆ ಪ್ರಿಯಾ ಮಹೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಸೋಶಿಯಲ್ ಕ್ಲಬ್ ಜಾಗೃತಿಯ ವಿದ್ಯಾರ್ಥಿ ಪ್ರತಿನಿಧಿ ದಿಯಾ ಪ್ರಮೋದ್(10ನೇ) ಪ್ರತಿಜ್ಞಾ ವಿಧಿಯನ್ನು ನಡೆಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ಸ್ವಾಗತಿಸಿ, ಸಹಶಿಕ್ಷಕಿ ಮತ್ತು ಜಾಗೃತಿ ಸೋಶಿಯಲ್ ಕ್ಲಬ್ ನ ನಿರ್ದೇಶಕಿ ನಿಶ್ಮಿತರವರು ಧನ್ಯವಾದವನ್ನು ಅರ್ಪಿಸಿದರು. ಸಹ ಶಿಕ್ಷಕಿ ಯೋಗಿತಾ ಪ್ರದೀಪ್ ಕಾರ್ಯಕ್ರಮವನ್ನು ನಿರೂಪಿಸಿದರು. ಲೀಗಲ್ ಸರ್ವಿಸ್ ಕಮಿಟಿಯ ಸದಸ್ಯರಾದ ಹರೀಶ್, ಸಹ ಮುಖ್ಯಶಿಕ್ಷಕಿ ಲವೀನಾ ಹನ್ಸ್, ಸಹ ಶಿಕ್ಷಕಿಯರಾದ ಲತಾ, ಆಶಾಲತಾ ರವರು ಸಹಕರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ