ಮುಳಿಯಾರು: ಕೋಟೂರು ಕಾರ್ತಿಕೇಯ ಕಿರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವ ಆಚರಣೆಯ ಅಂಗವಾಗಿ ಸಮಾರಂಭದ ಉದ್ಘಾಟನಾ ಕಾರ್ಯಕ್ರಮವು ಶಾಲೆಯಲ್ಲಿ ಸಂಪನ್ನವಾಯಿತು.
ಶಾಸಕ ಸಿ.ಎಚ್ ಕುಂಞಂಬು ಇವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಶ್ರೀಮತಿ ಮಿನಿ ಪಿ.ವಿ, ಅಧ್ಯಕ್ಷರು. ಮುಳಿಯಾರ್ ಗ್ರಾಮ ಪಂಚಾಯತ್ ಇವರು ಅಧ್ಯಕ್ಷಸ್ಥಾನ ವಹಿಸಿದರು.
ಮುಳಿಯಾರ್ ಗ್ರಾ.ಪಂ, ಉಪಾಧ್ಯಕ್ಷರಾದ ಎ. ಜನಾರ್ದನನ್, ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ರೈಸ ರಶೀದ್, ಶ್ರೀಮತಿ ಶ್ಯಾಮಲಾ, ಪಿ. ರವೀಂದ್ರನ್, ಶ್ರೀಮತಿ ಅನನ್ಯಾ ಎ, ಶ್ರೀಮತಿ ನಾರಾಯಣಿಕುಟ್ಟಿ, ಶ್ರೀಮತಿ ಸತ್ಯವತಿ, ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾಡ್ ಮೊಂಥೆರೋ, ಆಡಳಿತ ಸಮಿತಿ ಅಧ್ಯಕ್ಷ ಎ. ಗೋಪಾಲನ್ ಮಣಿಯಾಣಿ, ಆಡಳಿತ ಸಮಿತಿ ಕಾರ್ಯದರ್ಶಿ ಕೇಳುಮಾಸ್ಟರ್, ಖಾಲಿದ್ ಬೆಳ್ಳಿಪ್ಪಾಡಿ, ಎಂ. ಮಾಧವನ್, ಪಿ. ಕುಂಞಿಕಣ್ಣನ್ ನಾಯರ್, ವಿ. ಕುಂಞಿರಾಮನ್, ಬಾಲಕೃಷ್ಣನ್, ಶಿವಶಂಕರನ್, ಕೆ. ಗೋಪಾಲನ್, ಅಚ್ಯುತನ್ ಸಿ ಇವರು ಶುಭಾಶಯವಿತ್ತರು.
ಪಿ. ಬಾಲಕೃಷ್ಣನ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಕುಮಾರಿ ಕೆ.ಎಂ ಧನ್ಯವಾದವಿತ್ತರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ