ಶ್ರಾವಣ ಮಾಸದಲ್ಲಿ ಶ್ರೀಶೈಲ ದೇವಸ್ಥಾನದ ಆರ್ಜಿತ ಅಭಿಷೇಕಗಳು ಸ್ಥಗಿತ

Upayuktha
0


ಮಂಗಳೂರು:
ಅಧಿಕಶ್ರಾವಣ ಮಾಸ ಜುಲೈ18ರಿಂದ ಪ್ರಾರಂಭವಾಗಿದೆ. ಆಗಸ್ಟ್ 17ರಿಂದ ಸೆಪ್ಟೆಂಬರ್ 15ರ ವರೆಗೆ ನಿಜಶ್ರಾವಣ ಮಾಸ ಬರುತ್ತದೆ. ಶ್ರಾವಣಮಾಸೋತ್ಸವಗಳನ್ನು ನಿಜಶ್ರಾವಣಮಾಸದಲ್ಲಿ ಅಂದರೆ ಆಗಸ್ಟ್ 17ರಿಂದ ಸೆಪ್ಟೆಂಬರ್ 15ರ ವರೆಗೆ ಆಯೋಜಿಸಲಾಗಿದೆ.


ಶ್ರಾವಣಮಾಸೋತ್ಸವದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಶ್ರೀಶೈಲ ಕ್ಷೇತ್ರಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಆದ್ದರಿಂದ ಭಕ್ತರ ಅನುಕೂಲಕ್ಕಾಗಿ ಶ್ರಾವಣ ಮಾಸದ ಹಬ್ಬ ಹಾಗೂ ರಜಾ ದಿನಗಳಲ್ಲಿ ಶ್ರೀ ಸ್ವಾಮಿಯ ಗರ್ಭಗುಡಿ ಆರ್ಜಿತ ಅಭಿಷೇಕ ಹಾಗೂ ಸಾಮೂಹಿಕ ಆರ್ಜಿತ ಅಭಿಷೇಕಗಳನ್ನು ಸ್ಥಗಿತಗೊಳಿಸಲಾಗಿದೆ.


ಶ್ರಾವಣ ಮಾಸದಲ್ಲಿ ಶನಿವಾರ, ಭಾನುವಾರ, ಸೋಮವಾರ, ಆ.15ರಂದು ಸ್ವಾತಂತ್ರ್ಯ ದಿನ, ಆ.25ರಂದು ವರಲಕ್ಷ್ಮೀವ್ರತ, ಆ.31ರಂದು ಶ್ರಾವಣಪೌರ್ಣಮಿ, ಸೆ.6ರಂದು ಕೃಷ್ಣಾಷ್ಟಮಿ ಮುಂತಾದ ದಿನಗಳಲ್ಲಿ ಗರ್ಭಗುಡಿ ಆರ್ಜಿತ ಅಭಿಷೇಕಗಳು ಮತ್ತು ಸಾಮುದಾಯಿಕ ಅಭಿಷೇಕಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ.


ಶ್ರಾವಣ ಮಾಸದ ಮಿಕ್ಕ ದಿನಗಳಲ್ಲಿ, ಸರ್ವದರ್ಶನದ ಜೊತೆಗೆ (ಉಚಿತ ಅಲಂಕಾರಿಕ ದರ್ಶನದ ಜೊತೆಗೆ), ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶ ದರ್ಶನವನ್ನು ಸಹ ನಾಲ್ಕು ಕಂತುಗಳಲ್ಲಿ ಒದಗಿಸಲಾಗುತ್ತದೆ. ಹಾಗೆಯೇ ಅಮ್ಮನವರ ಕುಂಕುಮಾರ್ಚನೆಗಳನ್ನು ಸಹ ಎಂದಿನಂತೆ ಯಥಾವಿಧಿಯಾಗಿ ನಡೆಸಲಾಗುತ್ತದೆ. ಭಕ್ತರು ಸ್ಪರ್ಶ ದರ್ಶನಕ್ಕಾಗಿ 500 ರೂ.ಗಳ ಶುಲ್ಕ ಪಾವತಿಸಬೇಕಾಗುತ್ತದೆ.

ಈ ನಿಗದಿತ ದಿನಗಳನ್ನು ಹೊರತುಪಡಿಸಿ ಶ್ರಾವಣ ಮಾಸದ ಇತರ ದಿನಗಳಲ್ಲಿ ಶ್ರೀ ಸ್ವಾಮಿಯವರಿಗೆ ಅಭಿಷೇಕಗಳು ಎಂದಿನಂತೆ ನಡೆಯಲಿವೆ. ಈ ನಿರ್ದಿಷ್ಟ ದಿನಗಳನ್ನು ಹೊರತುಪಡಿಸಿ, ಸಾಮಾನ್ಯ ದಿನಗಳಲ್ಲಿ ಅಂದರೆ ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ನೀಡಲಾಗುವ ಉಚಿತ ಸ್ಪರ್ಶ ದರ್ಶನ ಎಂದಿನಂತೆ ಮುಂದುವರಿಯಲಿದೆ. ಆದರೆ ಇಂದಿನ ದಿನಗಳಲ್ಲಿ ಉಚಿತ ಸ್ಪರ್ಶ ದರ್ಶನಕ್ಕೆ ಬರುವ ಭಕ್ತರು ಮಧ್ಯಾಹ್ನ 1.30ರೊಳಗೆ ಕ್ಯೂ ಕಾಂಪ್ಲೆಕ್ಸ್‍ನಲ್ಲಿ ವರದಿ ಮಾಡಬೇಕು.

 ಭಕ್ತರು ಆರ್ಜಿತ ಅಭಿಷೇಕಗಳು, ಕುಂಕುಮಾರ್ಚನೆಗಳು, ಹೋಮಗಳು, ಶ್ರೀಸ್ವಾಮಿ ಅಮ್ಮನವರ ಕಲ್ಯಾಣೋತ್ಸವ ಇತ್ಯಾದಿ ಆರ್ಜಿತಸೇವಾ ಟಿಕೆಟ್‍ಗಳನ್ನು ಹಾಗೂ ಶ್ರೀಸ್ವಾಮಿಯ ಸ್ಪರ್ಶದರ್ಶನದ ಟಿಕೆಟ್‍ಗಳನ್ನು ದೇವಸ್ಥಾನದ ಅಧಿಕೃತ ವೆಬ್‍ಸೈಟ್‍ನಿಂದ ಮಾತ್ರ ಪಡೆಯಬೇಕು. ಕರೆಂಟ್ ಬುಕಿಂಗ್ ಮೂಲಕ ಈ ಟಿಕೆಟ್‍ಗಳು ಲಭ್ಯವಿಲ್ಲ.  ಭಕ್ತರು ಆಯಾ ಟಿಕೆಟ್‍ಗಳನ್ನು ದೇವಸ್ಥಾನದ ವೆಬ್‍ಸೈಟ್ www.srisailadevasthanam.org ಮೂಲಕ ಮುಂಗಡವಾಗಿ ಪಡೆಯಬಹುದು.


 ಆಗಸ್ಟ್ ತಿಂಗಳ ಟಿಕೆಟ್‍ಗಳ ಕೋಟಾವನ್ನು ಈಗಾಗಲೇ ದೇವಸ್ಥಾನದ ವೆಬ್‍ಸೈಟ್‍ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಅಂತೆಯೇ, ಸೆಪ್ಟೆಂಬರ್ ತಿಂಗಳ ಟಿಕೇಟ್‍ಗಳ ಕೋಟಾ ಆಗಸ್ಟ್ 25 ರಿಂದ ಲಭ್ಯವಿರುತ್ತದೆ. ಟಿಕೆಟ್‍ಗಳ ಲಭ್ಯತೆಯ ಆಧಾರದ ಮೇಲೆ ಪ್ರಾರಂಭದ ಸಮಯಕ್ಕಿಂತ ಒಂದು ಗಂಟೆ ಮೊದಲು ಆನ್‍ಲೈನ್‍ನಲ್ಲಿ ಟಿಕೆಟ್‍ಗಳನ್ನು ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ.


ಶ್ರೀ ಸ್ವಾಮಿಯ ಸ್ಪರ್ಶದರ್ಶನ ಚೀಟಿದಾರರು ಟಿಕೆಟ್ ಪ್ರತಿ (ಹಾರ್ಡ್ ಕಾಪಿ) ಮತ್ತು ಆಧಾರ್ ಕಾರ್ಡ್ ಮೂಲ ಅಥವಾ ಜೆರಾಕ್ಸ್ ಪ್ರತಿಯನ್ನು ತರಬೇಕು. ಆಯಾ ಸೇವಾ ಟಿಕೆಟ್‍ಗಳನ್ನು ಸ್ಕ್ಯಾನ್ ಮಾಡಿದ ನಂತರ ಮತ್ತು ಆಧಾರ್ ಗುರುತಿನ ಚೀಟಿಯೊಂದಿಗೆ ಆಯಾ ಟಿಕೆಟ್‍ಗಳನ್ನು ಪರಿಶೀಲಿಸಿದ ನಂತರ, ಭಕ್ತರಿಗೆ ಆಯಾ ಸೇವೆಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ 150 ರೂ. ತ್ವರಿತ ದರ್ಶನಕ್ಕೆ (ಶ್ರೀ ಸ್ವಾಮಿಯ ಅಲಂಕಾರಿಕ ದರ್ಶನ ಮಾತ್ರ) ಮತ್ತು 300 ರೂ. ಅತಿತ್ವರಿತ ದರ್ಶನ ಟಿಕೆಟ್‍ಗಳನ್ನು (ಶ್ರೀಸ್ವಾಮಿಯ ಅಲಂಕಾರಿಕ ದರ್ಶನ ಮಾತ್ರ) ಆನ್‍ಲೈನ್ ಮತ್ತು ಕರೆಂಟ್ ಬುಕಿಂಗ್ ಮೂಲಕ ಪಡೆಯಬಹುದು. ಈ ಪೈಕಿ 30%ರಷ್ಟು ಟಿಕೆಟ್‍ಗಳನ್ನು ಆನ್‍ಲೈನ್ ನೀಡಲಾಗಿದ್ದು, 70%ರಷ್ಟು ಟಿಕೆಟ್‍ಗಳನ್ನು  ಕರೆಂಟ್ ಬುಕ್ಕಿಂಗ್ ಮೂಲಕ ನೀಡಲಾಗುತ್ತದೆ.


 ಈ ಕಾರಣ ಆರ್ಜಿತಸೇವೆಗಳನ್ನು ಮಾಡುವ ಭಕ್ತರು ತಮ್ಮ ಶ್ರೀಶೈಲಯಾತ್ರೆಯನ್ನು ಆರ್ಜಿತಸೇವೆಗಳು ಮತ್ತು ಸ್ಪರ್ಶದರ್ಶನದ ಟಿಕೆಟ್‍ಗಳ ಲಭ್ಯತೆಗೆ ಅನುಗುಣವಾಗಿ ಯೋಜಿಸಿಕೊಳ್ಳಬೇಕು ಎಂದು ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯ ಶ್ರೀಶೈಲಂನ ಶ್ರೀಶೈಲ ದೇವಸ್ಥಾನದ ಡೆಪ್ಯೂಟಿ ಕಲೆಕ್ಟರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಎನ್. ಲವನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top