ಉಜಿರೆ: ಕಿರುಚಿತ್ರ ಸ್ಪರ್ಧೆಯಲ್ಲಿ ಎಸ್ ಡಿ ಎಂ ಕಾಲೇಜಿಗೆ ದ್ವಿತೀಯ ಪ್ರಶಸ್ತಿ

Upayuktha
0

 


ಉಜಿರೆ: ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ 'ಇಂಪ್ರೆಶನ್-2023' ರಾಜ್ಯ ಮಟ್ಟದ ಮಾಧ್ಯಮ ಸ್ಪರ್ಧೆಯ ಕಿರುಚಿತ್ರ ವಿಭಾಗದಲ್ಲಿ ಉಜಿರೆಯ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿದ ಕಿರುಚಿತ್ರ ದ್ವಿತೀಯ ಸ್ಥಾನ ಪಡೆದುಕೊಂಡಿದೆ.


'ನಾದ' ಎಂಬ ಶೀರ್ಷಿಕೆಯಡಿ ಈ ಕಿರುಚಿತ್ರವು ಮೂಡಿಬಂದಿದೆ. ಈ ಕಿರುಚಿತ್ರವು ಕಿರಣ್‍ ಕುಲಕರ್ಣಿ ಕಥೆ ಮತ್ತು ನಿರ್ದೇಶನ, ಶ್ಯಾಮ್ ಪ್ರಸಾದ ಛಾಯಗ್ರಹಣ, ಜೆಸ್ವಿನ್, ಶಶಿಧರ್ ಹಾಗು ಅರ್ಪಿತ್ ಇಚ್ಚೆ ಸೃಜನಶೀಲ ತಂಡದ ಮೂಲಕ ಮೂಡಿ ಬಂದಿದೆ. ಈ ಕಿರುಚಿತ್ರದಲ್ಲಿಅರವಿಂದ, ಪೂರ್ಣಶ್ರೀ, ದಿವ್ಯ ಲಕ್ಷ್ಮಿ ಮತ್ತು ಮದನ್ ನಟಿಸಿದ್ದು, ಅಮಿತ ಮತ್ತು ಸಂಪತ್‍ಕುಮರ್ ರೈ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ಈ ಚಿತ್ರಕ್ಕೆ ಸಹಾಯಕ ಪ್ರಾಧ್ಯಪಕ ಸುನಿಲ್ ಹೆಗ್ಡೆ ಮತ್ತು ಎಸ್ ಡಿ ಎಂ ಮಲ್ಟಿ ಮೀಡಿಯಾ ಸ್ಟುಡಿಯೋದ ತಂತ್ರಜ್ಞ ರಕ್ಷಿತ್‍ ರೈಯವರ ಮಾರ್ಗದರ್ಶನದಲ್ಲಿ ಮೂಡಿಬಂದಿದೆ. 


ಆಧುನಿಕ ಸಮಾಜದಲ್ಲಿ ಪೂರ್ವಗ್ರಹ ಪೀಡಿತ ದೃಷ್ಟಿಕೋನವನ್ನು ಬಿಟ್ಟು ವಾಸ್ತವವಾದಿ ಉದಾರತೆ ತೋರಬೇಕು ಎಂಬ ಸಂದೇಶ ಈ ಚಿತ್ರ ಹೊಂದಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top