ಮಣಿಪಾಲ: ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ಕಾರ್ಗಿಲ್ "ವಿಜಯ್ ದಿವಸ" ಪ್ರಯುಕ್ತ 'ಸಮರ ವೀರರ ನೆನಪಿನಲ್ಲಿ'ಎಂಬ ವಿಶೇಷ ಕಾರ್ಯಕ್ರಮ ಅರ್ಪಿಸುತ್ತಿದೆ. ಇದು ಜುಲೈ ತಿಂಗಳ ದಿನಾಂಕ 26ರಂದು ಬುಧವಾರ 6 ಗಂಟೆಗೆ ಪ್ರಸಾರವಾಗಲಿದೆ. ಜುಲೈ 27 ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಇದರ ಮರು ಪ್ರಸಾರವಿರುವುದು.
ಈ ವಿಶೇಷ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ಸರ್ವೋತ್ತಮ ಪೂಜಾರಿ ಕೋಡಿಕನ್ಯಾನ ಮತ್ತು ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಎ.ಎಲ್.ಟಿ ರಾಷ್ಟ್ರೀಯ ತರಬೇತುದಾರರಾದ ಸಾವಿತ್ರಿ ಮನೋಹರ್ ಭಾಗವಹಿಸಲಿದ್ದಾರೆ ಎಂದು ರೇಡಿಯೊ ಮಣಿಪಾಲದ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ