ಉಡುಪಿ ಬಂಟಕಲ್‍ನಲ್ಲಿ ಉಚಿತ ಕಣ್ಣಿನತಪಾಸಣಾ ಶಿಬಿರ

Chandrashekhara Kulamarva
0


ಉಡುಪಿ:
ಜಿಲ್ಲಾ ಸಂಚಾರಿ ನೇತ್ರಘಟಕ ಉಡುಪಿ ಜಿಲ್ಲೆ ಇವರ ವತಿಯಿಂದ ಶಿರ್ವ ಸಮುದಾಯ ಆರೋಗ್ಯಕೇಂದ್ರ ವ್ಯಾಪ್ತಿಯ ಬಂಟಕಲ್‍ನಲ್ಲಿ ರವಿವಾರ ಉಚಿತ ಕಣ್ಣಿನತಪಾಸಣಾ ಶಿಬಿರ ನಡೆಯಿತು.


ಸದರಿ ಶಿಬಿರದಲ್ಲಿ 193 ಮಂದಿಗೆ ಕಣ್ಣಿನತಪಾಸಣೆ ನಡೆಸಲಾಗಿದ್ದು, 69 ಮಂದಿಗೆ ಕನ್ನಡಕವನ್ನು ಉಚಿತವಾಗಿ ನೀಡಲಾಯಿತು. ಕಣ್ಣಿನಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ 9 ಮಂದಿಗೆ ಜಿಲ್ಲಾಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು.


ಶಿಬಿರದಲ್ಲಿ ಜಿಲ್ಲಾ ಸಂಚಾರಿ ನೇತ್ರಘಟಕದ ನೇತ್ರತಜ್ಞ ಡಾ.ನಿತ್ಯಾನಂದ ನಾಯಕ್, ಆರ್.ಬಿ.ಎಸ್.ಕೆತಂಡದ ನೇತ್ರಸಹಾಯಕಿ ಸೌಮ್ಯ ಹಾಗೂ ಹರ್ಷ ಮತ್ತು ಇತರೆಸಿಬ್ಬಂದಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top