ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ
ಉಜಿರೆ: ವೃತ್ತಿಪರ ಒತ್ತಡ ಮತ್ತು ದೈನಂದಿನ ಸಮಸ್ಯೆಗಳ ಕಾರಣದಿಂದ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಶಿವಮೊಗ್ಗದ ಮಾನಸ ನರ್ಸಿಂಗ್ ಹೋಂನ ಮನಃಶಾಸ್ತ್ರಜ್ಞೆ ಪೂಜಾ ಡಿ.ಜಿ ಅಭಿಪ್ರಾಯಪಟ್ಟರು.
ಉಜಿರೆ ಎಸ್ ಡಿ ಎಂ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಮನಶಾಸ್ತ್ರ ವಿಭಾಗವು 'ವಿಶ್ವ ಸ್ಕಿಜೋಫ್ರೇನಿಯಾ ದಿನ'ದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಮಾನಸಿಕ ಖಿನ್ನತೆಗೆ ಒಳಗಾಗುವುದಕ್ಕೆ ಕಾರಣಗಳು ಏನೆಂಬುದರತ್ತ ಗಮನ ಹರಿಸಬೇಕಾಗಿದೆ. ದೈನಂದಿನ ಬದುಕಿನಲ್ಲಿ ಮಹತ್ತರ ಬದಲಾವಣೆಗಳನ್ನು ತಂದುಕೊಳ್ಳುವುದರ ಮೂಲಕ ಮಾನಸಿಕ ಖಿನ್ನತೆಯ ಅಪಾಯಗಳಿಂದ ಪಾರಾಗಬಹುದು. ಉತ್ತಮ ಹವ್ಯಾಸಗಳ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸುವಿಕೆ, ದೈನಂದಿನ ವ್ಯಾಯಾಮಕ್ಕೆ ಆದ್ಯತೆ ನೀಡುವಿಕೆ ಸೇರಿದಂತೆ ಬದುಕಿನ ಶೈಲಿಯನ್ನು ಬದಲಾಯಿಸಿಕೊಂಡು ಖಿನ್ನತೆಯಿಂದ ದೂರ ಉಳಿಯಬಹುದು ಎಂದು ಹೇಳಿದರು.
ಮಾನಸಿಕ ಖಿನ್ನತೆಯಿಂದಾಗಿ ಮಹಿಳೆಯರು ಆತ್ಮಹತ್ಯೆ ಒಳಗಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಒಟ್ಟು ಸಾವಿನ ಪ್ರಮಾಣದಲ್ಲಿ ಶೇ. 20ರಷ್ಟು ಜನರುಆತ್ಮಹತ್ಯೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಆತಂಕ, ಕೆಲಸದ ಒತ್ತಡ, ಅಶಾಂತಿ ಇತ್ಯಾದಿ ಕಾರಣಗಳಿಂದಾಗಿ ಆತ್ಮಹತ್ಯೆ ಸಂಖ್ಯೆ ಏರಿಕೆಯಗುತ್ತಿದೆ. ಮಾನಸಿಕ ಖಿನ್ನತೆ ತೊಡೆದು ಹಾಕಲು ಮನೋಶಾಸ್ತ್ರಜ್ಞರನ್ನು ಭೇಟಿಯಾಗುವುದು ಅಗತ್ಯ. ಅವರಿಂದ ದೊರೆಯುವಂತಹ ಸಲಹೆಗಳನ್ನು ಸರಿಯಾಗಿ ಪರಿಪಾಲಿಸಿದಲ್ಲಿ ಈ ದುರ್ಘಟನೆಗಳನ್ನು ಕಡಿಮೆ ಮಾಡಬಹುದುಎಂದರು.
ಭಯ, ಅನಿರೀಕ್ಷಿತ ಸ್ವಭಾವಗಳ ಮನೋಪ್ರವೃತ್ತಿ ಮತ್ತು ಆಕ್ರಾಮಕ ವರ್ತನೆಗಳ ಗುಣಲಕ್ಷಣಗಳನ್ನು ಕಳಚಿಕೊಳ್ಳಬೇಕು. ಸ್ವಭಾವಗಳ ಒಳಗೇ ಇರುವ ಮಿತಿಗಳನ್ನು ಕಂಡುಕೊಂಡು ಬದಲಾಗುವ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕು. ಈ ಮೂಲಕ ಸ್ಕಿಜೋಫ್ರೇನಿಯಾದಂಥ ಮಾನಸಿಕ ತೊಳಲಾಟದ ಪರಿಸ್ಥಿತಿಯನ್ನು ಎದುರಿಸುವ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಅಗತ್ಯವೆನ್ನಿಸಿದರೆ ಮನಃಶಾಸ್ತ್ರಜ್ಞರೊಂದಿಗೆ ಸಮಾಲೋಚಿಸಿ ವ್ಯಕ್ತಿತ್ವವನ್ನು ಮರು ರೂಪಿಸಿಕೊಳ್ಳಬೇಕು ಎಂದು ನುಡಿದರು.
ಮನಶಾಸ್ತ್ರ ವಿಭಾಗದ ಮುಖ್ಯಸ್ಥರಾದಡಾ. ವಂದನಾಜೈನ್, ಕಾರ್ಯಕ್ರಮದಆಯೋಜಕರಾದ ಸಿಂಧು ವಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಛಾಯಾ ಸ್ವಾಗತಿಸಿದರು. ಅನುಶೀ ನಿರೂಪಿಸಿದರು. ಅನುಷಾ ಜಿ ಶೆಟ್ಟಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ