ಚುನಾವಣಾ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯ ಮೂಲಕ ಕೆಲವೊಂದು ಆಕಷ೯ಕ ಭರವಸೆಗಳನ್ನು ಸಾವ೯ಜನಿಕರ ಮುಂದಿಡುವುದು ಸಹಜ. ಆದರೆ ಇಂತಹ ಭರವಸೆಯನ್ನು ಜನರ ಮುಂದಿಡುವಾಗ ಸ್ವಲ್ಪ ಜಾಗೃತೆ ವಹಿಸಿ ಮುಂದೆ ಈ ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಅನ್ನುವುದನ್ನು ಖಾತರಿ ಪಡಿಸಿಕೊಂಡೆ ಜನರ ಮುಂದಿಡಬೇಕು. ಇಲ್ಲವಾದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.
ಆದರೆ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು ತಮಾಷೆ ಮಾಡುವ ತರದಲ್ಲಿ ಬಿಂಬಿಸುತ್ತಿರುವುದನ್ನು ನೇೂಡಿದರೆ ನಮ್ಮ ರಾಜ್ಯ/ಕೇಂದ್ರ ಸರಕಾರಗಳು ತಮ್ಮ ಭರವಸೆಗಳನ್ನು ನೀಡಿ ಹೇಗೆ ಅನುಷ್ಠಾನ ಗೊಳಿಸುವ ಪ್ರಕ್ರಿಯೆ ನಡೆಸುತ್ತದೆ ಅನ್ನುವ ಬಗ್ಗೆಕೆಲ ಮಾಧ್ಯಮಗಳಿಗೆ ಹಾಗೂ ಕೆಲವೊಂದು ರಾಜಕೀಯ ಹಿತಾಸಕ್ತಿ ವ್ಯಕ್ತಿಗಳಿಗೆ ಮಾಹಿತಿ ಸ್ವಲ್ಪ ಕೊರತೆ ಇರುವುದು ಎದ್ದು ಕಾಣುತ್ತದೆ.
ಚುನಾವಣೆ ಮುಗಿದಿದೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದೆ ಸರಿ; ಆದರೆ ಇನ್ನೂ ಕೂಡಾ ಸರ್ಕಾರ ರಚನೆಯಾಗಿಲ್ಲ ಇದಾಗಲೇ ಅಣುಕ ತನದ ಪ್ರಚಾರದ ಬೊಬ್ಬೆ ಹಾಕಲು ಶುರುಮಾಡಿದ್ದಾರೆ. "ನಾನು ಕರೆಂಟ್ ಬಿಲ್ ಕಟ್ಟುವುದಿಲ್ಲ ಬಸ್ಸಿಗೆ ಟಿಕೇಟು ಮಾಡುವುದಿಲ್ಲ ಅನ್ನುವ ಪ್ರಚಾರದ ಹೇಳಿಕೆಗಳು ತೀರ ಬಾಲಿಶವಾದದ್ದು ಅನ್ನಿಸುತ್ತದೆ.
ಸರ್ಕಾರ ರಚನೆಯಾದ ಮೇಲೆ ಸಚಿವ ಸಂಪುಟದಲ್ಲಿ ನಿಣ೯ಯ ತೆಗೆದು ಕೊಂಡು ಸಂಬಂಧಿಸಿದ ಇಲಾಖಾ ಮಟ್ಟದಲ್ಲಿ ಅಧಿಕಾರಿಗಳು ಈ ಪ್ರಕಟಿತ ಸ್ಕೀಮ್ ಗಳಿಗೆ ಸಂಬಂಧಿಸಿದ ನೀತಿ ನಿಯಮ ಷರತ್ತುಗಳ ಆಧಾರವಾಗಿಟ್ಟುಕೊಂಡು ಆಹ೯ ಫಲಾನುಭವಗಳನ್ನು ಗುರುತಿಸಿ ಅನುಷ್ಠಾನಗೊಳಿಸುವುದು ನಿಯಮ. ಉದಾ: ತಾತ್ಕಾಲಿಕ ನೌಕರರನ್ನು ಖಾಯಂ ಗೊಳಿಸುತ್ತೇವೆ ಅಂದರೆ ಅಲ್ಲಿ ಕೆಲವು ಷರತ್ತು ಆಹ೯ತೆಗಳನ್ನು ಪರಿಶೀಲನೆ ಮಾಡಿ ಖಾಯಂಗೊಳಿಸುವುದು ನಡೆದು ಬಂದ ಕ್ರಮ. ಅದು ಬಿಟ್ಟು ಸಾರಾಸಗಾಟಾಗಿ ದಾರಿ ಮೇಲೆ ಹೇೂಗುವವರನ್ನು ಕರೆದು ಖಾಯಂ ಗೊಳಿಸಲು ಸಾಧ್ಯವೇ? ಆದರೆ ಭರವಸೆ ನೀಡುವಾಗ ಸ್ವಲ್ಪ ಜಾಗೃತಿ ವಹಿಸಿ ನೀಡ ಬೇಕಾಗಿತ್ತು ಅನ್ನುವ ಮಾತು ಒಪ್ಪಿಕೊಳ್ಳುತ್ತೇನೆ. ಸುಮ್ಮನೆ ಬಡವರ ಮತಗಳು ಬರುತ್ತದೆ ಅಂದು ಕೊಂಡು ಕೈಯಲ್ಲಿ ಸಾಧ್ಯವಾಗದ ಭರವಸೆ ನೀಡುವುದು ಶುದ್ಧ ತಪ್ಪು.
ಸರ್ಕಾರ ಬಂದ ಮೇಲೆ ಯಾವ ರೀತಿಯಲ್ಲಿ ನೀತಿ ನಿರೂಪಿಸುತ್ತದೆ ಅನ್ನುವುದನ್ನು ಕಾದು ನೇೂಡಿ ಪ್ರತಿಕ್ರಿಯೆ ನೀಡಬೇಕೆ ಹೊರತು ಸುಮ್ಮನೆ ಮೇೂಜಿಗಾಗಿ ಹೇಳಿಕೆಯ ನಾಟಕ ಮಾಡಲೇ ಬಾರದು. ಇದು ಸರ್ಕಾರವನ್ನು ದಾರಿತಪ್ಪಿಸಿ ಇಕ್ಕಟಿಗೆ ಸಿಲುಕಿಸುವ ಪರಿ ಎಂದೇ ಭಾವಿಸಬೇಕು.
- ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ