ಸದ್ದು ಮಾಡುತ್ತಿದೆ 'ತುಳುನಾಡಿಗೆ ಪುತ್ತಿಲ' ಘೋಷಣೆ - ಸಂಸದ ಅಭ್ಯರ್ಥಿಯಾಗಿ ಘೋಷಣೆ ಮಾಡುವಂತೆ ಪ್ರಧಾನಿಗೆ ಪತ್ರ

Upayuktha
0

ಕೇವಲ 1 ಗಂಟೆಯಲ್ಲಿ 15000 ಜನರ ವಾಟ್ಸಾಪ್ ಗ್ರೂಪ್ ರಚನೆ



ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಆಯ್ಕೆಯ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ರಾಜ್ಯಾದ್ಯಂತ ಬಹುದೊಡ್ಡ ಸಂಚಲನ ಸೃಷ್ಟಿಸಿದ ಅರುಣ್‌ ಕುಮಾರ್ ಪುತ್ತಿಲ ಅವರನ್ನು ಮುಂದಿನ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಕ್ಷೇತ್ರದಿಂದ ಅಭ್ಯರ್ಥಿಯಾಗಿಸಬೇಕು ಎಂಬ ಬಲವಾದ ಬೇಡಿಕೆ ಈಗ ಪ್ರಾರಂಭವಾಗಿದೆ. ಈ ಸಂಬಂಧ ಸಂಘದ ಕಾರ್ಯಕರ್ತರು ಹಾಗೂ ಖ್ಯಾತ ವಾಗ್ಮಿಗಳಾದ ಆದರ್ಶ ಗೋಖಲೆ ಮತ್ತು ಅಕ್ಷಯ ಗೋಖಲೆ ಸಹೋದರ ಸಹೋದರಿಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.


ಈ ಪತ್ರದ ಪೂರ್ಣ ಪಾಠವನ್ನು ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಮುಂದೆ ಓದಿ...



ಪ್ರೀತಿಯ ಪ್ರಧಾನ ಸೇವಕ ನರೇಂದ್ರ ಮೋದಿ ಮಹೋದಯರಿಗೆ ಗೌರವಪೂರ್ವಕ ಪ್ರಣಾಮಗಳು


ಕರ್ನಾಟಕ ವಿಧಾನಸಭೆಯ ಚುನಾವಣಾ ಫಲಿತಾಂಶವು ಹೊರಬಿದ್ದಿದ್ದು ಈ ಪ್ರಮಾಣದ ಸೋಲನ್ನು ತಾವು ಪೂರ್ವದಲ್ಲಿಯೇ ನಿರೀಕ್ಷಿಸಿದ್ದಿರಬಹುದು. ದೇವದುರ್ಲಭ ನಿಸ್ವಾರ್ಥ ಕಾರ್ಯಕರ್ತರ ನೋವನ್ನು ಆಲಿಸುವ ತಾಳ್ಮೆಯೇ ಇಲ್ಲದ ತಥಾಕಥಿತ ರಾಜ್ಯ ನಾಯಕರ ಅಧಿಕಾರದ ದರ್ಪ ಹಾಗೂ ಅಹಂಕಾರದ ಮಾತುಗಳಿಗೆ ಫಲಿತಾಂಶ ಕೈಗನ್ನಡಿಯಂತಿದೆ. ನೀವು ಮತ್ತು ಶ್ರೀ ಯೋಗಿ ಆದಿತ್ಯನಾಥರು. ಕೊನೆಯ ಕ್ಷಣದಲ್ಲಿ ಭೇಟಿಯಿತ್ತು, ಕೈಮುಗಿದು ರೋಡ್‌ ಶೋ ನಡಸದೇ ಇದ್ದಿದ್ದರೆ, ಬಜರಂಗಬಲಿಯ ಜೈಕಾರ ಮೊಳಗದೇ ಇದ್ದಿದ್ದರೆ ಗೆಲುವು ಮೂವತ್ತೈದು ಕ್ಲೇತ್ರಗಳಿಗಷ್ಟೇ ಮೀಸಲಾಗುತ್ತಿತ್ತೇನೋ?  ಏನೇ ಇರಲಿ. ಪರಮವೈಭವ ಭಾರತದ ಕನಸು ಕಾಣುವ ಕಾರ್ಯಕರ್ತರ ಮನದ ಭಾವನೆಗಳನ್ನು ಗೌರವಿಸದಿದ್ದರೆ, ಪಕ್ಷದಷ್ಟೇ ವ್ಯಕ್ತಿಯೂ ಮುಖ್ಯವಾಗುವನೆಂಬುದು ನಿಮ್ಮ ಅರಿವಿಗೆ ಬರದೇ ಹೋದರೆ. ಪರಿಸ್ಥಿತಿ ವ್ಯತಿರಿಕ್ತವಾಗುವುದರಲ್ಲಿ ಅನುಮಾನವಿಲ್ಲ. ರಸ್ತೆ ಮಧ್ಯದಲ್ಲಿ ಹೆಣವಾಗಲು ಕಾರ್ಯಕರ್ತರು ಬೇಕು, ಮತೀಯ ಸಂಘಟನೆಗಳ ವಿರುದ್ಧ ಹೋರಾಟಗಳನ್ನು ಸಂಘಟಿಸಲು ಕಾರ್ಯಕರ್ತರು ಬೇಕು, ಧ್ವಜ. ಏರಿಸಲು - ಕುರ್ಚಿ ಜೋಡಿಸಲು ಕಾರ್ಯಕರ್ತರು ಬೇಕು. ಆದರೆ ಅಭ್ಯರ್ಥಿಗಳ ಆಯ್ಕೆಯ ಸಂದರ್ಭ ಬ೦ದಾಗ ಕಾರ್ಯಕರ್ತರ ಕಣ್ಣಿಗೆ ಬಟ್ಟಿ ಕಟ್ಟಿ ಸೃಹಿತಾಸಕ್ತಿಯ ಸಾಧನಗಾಗಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನೇ ಸಾರ್ವತ್ರಿಕವೆಂದು ಬಿಂಬಿಸುವ ನಾಯಕರಿಗೆ ಬುದ್ಧಿ ಹೇಳುವ ಕಾರ್ಯವನ್ನು ತಾವು ಮಾಡದೇ ಇದ್ದರೆ ಪರಿಣಾಮ ಏನಾಗುವುದೆಂಬುದಕ್ಕೆ ಕರ್ನಾಟಕಕ್ಕಿಂತ ಬೇರೆ ಉದಾಹರಣೆ ಬೇಕೇ?


ಕಾರ್ಯಕರ್ತನನ್ನೇ ದೇವರೆಂದು ಭಾವಿಸುವ ತಮಗೆ 'ಪುತ್ತೂರಿಗೆ ಪುತ್ತಿಲ' ಅಭಿಯಾನ: ಖಂಡಿತವಾಗಿಯೂ ಗಮನಕ್ಕೆ ಬಂದಿರುತ್ತದೆ. ವೋಟ್‌ ಪಡೆಯಲು ನೋಟು, ಬಿರಿಯಾನಿ ನೀಡದ ಕೇವಲ ಹಿಂದುತ್ತ ಮತ್ತು ಅಭಿವೃದ್ಧಿಯ ಕನಸಿನೊಂದಿಗೆ ಪುತ್ತೂರಿನಲ್ಲಿ ಕಣಕ್ಕಿಳಿದಿದ್ದ ಶ್ರೀ ಅರುಣಕುಮಾರ ಪುತ್ತಿಲರನ್ನು ತಾವು ಅಥವಾ ತಥಾಕಥಿತ ನಾಯಕರು ಕಡಗಣಿಸಿದ್ದು ಸೂಕ್ತವ೦ದು ನಿಮಗೆ ಅನಿಸುವುದೇ? ನಿಮ್ಮ ನಾಯಕರ ಹೊಂದಾಣಿಕೆ ರಾಜಕಾರಣವನ್ನು ಕಾರ್ಯಕರ್ತರು ವಿರೋಧಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದರೂ ತಾವು ಮೌನ ವಹಿಸಿದ್ದು ಸೂಕ್ತವೇ? ಯಾವ ಪುತ್ತೂರನ್ನು ರಾಷ್ಟ್ರೀಯ. ಸ್ವಯಂಸೇವಕ ಸ೦ಘದ ಭದ್ರಕೋಟೆಯಂದು ದಕ್ಷಿಣ ಭಾರತವೇ ಗೌರವದಿಂದ ಕಾಣುವುದೋ, ಯಾವ ಪುತ್ತೂರು ಹಿಂದುತ್ವ ಮತ್ತು ದೇಶಭಕ್ತಿಯ ನೆಲವಾಗಿದೆಯೋ ಅಂತಹ ಕ್ಷೇತ್ರದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಣಯ ತೆಗೆದುಕೊಂಡ ಪಕ್ಷದ ತಪ್ಪನ್ನು ತಕ್ಷಣವೇ ಪರಿಹರಿಸಲು ಸಾಧ್ಯವಾಗದಿರಲು ಕಾರಣವೇನು? ಯಾವುದೇ ರಾಜಕೀಯ ಅಧಿಕಾರ ಇಲ್ಲದಿದ್ದರೂ ಕಳೆದರಡು ದಶಕಗಳಿಂದ ಪುತ್ತೂರಿನ ಮನೆಮಗನ೦ತೆ ಕಾರ್ಯನಿರ್ವಹಿಸಿ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದ ಪುತ್ತಿಲರ ಹಿಂದೆ ಆಬಾಲವೃದ್ಮ ಅಸಂಖ್ಯ ಜನ ಬೆನ್ನೆಲುಬಾಗಿ ನಿಂತದ್ದು ತಪ್ಪೇ?


ಕಾಂಗ್ರೆಸ್‌ನ ಅಭ್ಯರ್ಥಿಯೇ ಗೆಲ್ಲಬೇಕೆ೦ದು ಯೋಚಿಸಿ, ಅದಕ್ಕೆ ತಕ್ಕಂತೆ ಕಾರ್ಯ ಯೋಜಿಸಿ ಪಕ್ಷಕ್ಕೇ ಮೋಸ ಮಾಡಲು ನಿರ್ಧರಿಸಿದ 'ನಿರ್ಣಯ ಪ್ರಮುಖರ ದೃಷ್ಟಿಯಲ್ಲಿ ಶ್ರೀ ಪುತ್ತಿಲರನ್ನು ಬೆ೦ಬಲಿಸುವವರು. ದೇಶದ್ರೋಹಿಗಳಾಗಿ ಬದಲಾದುದು ಬೇಸರದ ಸಂಗತಿ. ಶ್ರೀ ಅರುಣಕುಮಾರ ಪುತ್ತಿಲರನ್ನು ಬೆಂಬಲಿಸಿದ ಕಾರಣಕ್ಕಾಗಿ ನಾವು ದೇಶದ್ರೋಹಿಗಳಾಗಿದ್ದೇವೆ, ಚಿಂತೆಯಿಲ್ಲ. ಸ೦ಘ ವಿರೋಧಿಗಳೆಂಬ ಹಣೆಪಟ್ಟಿಯನ್ನೂ ಹಚ್ಚಲಾಗಿದೆ, ಚಿಂತೆಯಿಲ್ಲ. 'ನಿಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಜೀವನವನ್ನೇ ಹಾಳು ಮಾಡುತ್ತೇವೆ: ಎ೦ದು ಬೆದರಿಸಿದರು, ಚಿಂತೆಯಿಲ್ಲ. ಇವತ್ತಿನ ಪುತ್ತೂರಿನ ಫಲಿತಾ೦ಶ ಎಲ್ಲದಕ್ಕೂ ಉತ್ತರ ನೀಡಿದೆ. ಶ್ರೀ ಅರುಣಕುಮಾರ ಪುತ್ತಿಲರು ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸೋತರೂ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ತನ್ನ ಹನುಮಶಕ್ತಿಯನ್ನು ತೋರಿದ್ದಾರೆ.  ಜಾತಿ ಮತ್ತು ವಶೀಲಿಬಾಜಿಗಳಿಗೆ ತಾವು ಕಿವಿಗೊಡುವವರಲ್ಲವೆಂಬ ನಮ್ಮ ನಂಬಿಕೆ ಸುಳ್ಳಾಗದಿರಲಿ.


ಸಮಸ್ತ ಪುತ್ತಿಲ ಅಭಿಮಾನಿಗಳ ಪರವಾಗಿ ತಮ್ಮಲ್ಲಿ ನಮ್ಮದೊಂದು ವಿನಂತಿಯಿದೆ. ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ತಮ್ಮ ಪರವಾಗಿ ಪ್ರಚಾರ ನಡೆಸಿ ನಿಮ್ಮ ಗೆಲುವಿಗಾಗಿ ಶ್ರಮವಹಿಸಿದ ಶ್ರೀ ಅರುಣಕುಮಾರ ಪುತ್ತಿಲರನ್ನು 2024ರ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ / ಮ೦ಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆದಷ್ಟು ಶೀಘ್ರದಲ್ಲಿ ಘೋಷಿಸಬೇಕೆಂಬುದು ನಮ್ಮ ಅಪೇಕ್ಷೆ. ಸದಾಕಾಲ ಕಾರ್ಯಕರ್ತರ ಪರವಾಗಿ ನಿಲ್ಲುವ, ಹಿಂದುಗಳಿಗೆ ಶಕ್ತಿ ತು೦ಬುವ ಶ್ರೀ ಪುತ್ತಿಲರು ನಿಮೊಂದಿಗೆ ಕಾರ್ಯನಿರ್ವಹಿಸಿ ಕರಾವಳಿ ಕರ್ನಾಟಕ ಮತ್ತು ಕೇಂದ್ರ ಸರಕಾರದ ನಡುವೆ ಕೊ೦ಡಿಯಾಗಬೇಕೆ೦ಬುದು ನಮ್ಮ ಕನಸು. ಜಾತಿಬಲ, ಹಣಬಲದ ತಕ್ಕಡಿಯಲ್ಲಿ ಶ್ರೀ ಅರುಣಕುಮಾರ ಪುತ್ತಿಲರನ್ನು ತೂಗದೆ ಹಿಂದುತ್ತ, ರಾಷ್ಟ್ರೀಯತೆಯ ಆಧಾರದಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ತಮ್ಮಲ್ಲಿ ವಿನಂತಿಸುತ್ತಿದ್ದೇವೆ.


ಪಕ್ಷಕ್ಕಿಂತಲೂ ದೇಶ ಮುಖ್ಯವಂಬ ಶ್ರೀ ಅಟಲ್‌ ಬಿಹಾರಿ ವಾಜಪೇಯಿಯವರ ಮಾತನ್ನು ಗಮನದಲ್ಲಿರಿಸಿ ದೇಶದೇಳಿಗೆ ಬಯಸುವ ಶ್ರೀ ಪುತ್ತಿಲರನ್ನು ಪೂರ್ಣಮನಸ್ಸಿನಿಂದ, ಮುಂದಿನ ಲೋಕಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಮಗದೂಮ್ಮ ತಮ್ಮಲ್ಲಿ ಪ್ರೀತಿಪೂರ್ವಕವಾಗಿ ವಿನಂತಿಸುತ್ತಿದ್ದೇವೆ. ನಮ್ಮ ಈ ಪ್ರಾರ್ಥನೆ ತಮಗೆ ಇ೦ದು ನಗು ತರಿಸಬಹುದು, ಹುಚ್ಚೆನಿಸಬಹುದು ಅಥವಾ ಈ ಗುಬ್ಬಚ್ಚಿ ಧ್ವನಿಯನ್ನು ತಾವು ಅಲಕ್ಷಿಸಲೂ ಬಹುದು. ಈ ಪತ್ರವನ್ನು ನಿರ್ಲಕ್ಷಿಸುವ ಮೊದಲು ತಮ್ಮ ವಿಶ್ವಾಸಿಯೊಬ್ಬನನ್ನು ಪುತ್ತೂರು ಅಥವಾ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಳುಹಿಸಿ ವಾಸ್ತವಾಂಶಗಳನ್ನು ಗುರುತಿಸುವಂತೆ ಅಣ್ಣತಂಗಿಯ ಕಾಳಜಿಪೂರ್ವಕ ಮನವಿ.

ಜಯತು ಭಾರತಮ್, ಜಯತು ಮನುಕುಲಮ್

- ಆದರ್ಶ ಗೋಖಲೆ, ಅಕ್ಷಯಾ ಗೋಖಲೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top