ಮಂಗಳೂರು: ತುಳು-ಕನ್ನಡ ಲೇಖಕ, ಸಂಪಾದಕ ಮತ್ತು ಸಂಘಟಕ ಭಾಸ್ಕರ ರೈ ಕುಕ್ಕುವಳ್ಳಿ ಅವರ ಒಂದು ನೂರು ಬರಹಗಳ ಸಂಚಯ 'ಏಕಾಂತದಿಂದ ಲೋಕಾಂತರಕೆ' ಸಂಪರ್ಕ- ಸದಾಶಯಗಳ ಭಾವಯಾನ ಕೃತಿ ಏ. 22 ರ ಶನಿವಾರ ಸಂಜೆ 4 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಗರದ ಉರ್ವಾ ಸ್ಟೋರ್ ಅಂಬೇಡ್ಕರ್ ಭವನದಲ್ಲಿ ಜರಗುವ 'ಸಾಂಸ್ಕೃತಿಕ ವೈಭವ' ಸಮಾರೋಪ ಸಮಾರಂಭದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ನಾಡು - ನುಡಿ, ಸಂಸ್ಕೃತಿಗೆ ಸಂಬಂಧಿಸಿದ ವೈಚಾರಿಕ ಲೇಖನಗಳೊಂದಿಗೆ ಸಾಮಾಜಿಕ ಮತ್ತು ಸಾಮುದಾಯಿಕ ವಿದ್ಯಮಾನಗಳು, ಅಪರೂಪದ ವ್ಯಕ್ತಿ ಚಿತ್ರಣಗಳು ಹಾಗೂ ಲೇಖಕರು ದೇಶ - ವಿದೇಶಗಳನ್ನು ಸಂದರ್ಶಿಸಿದ ಪ್ರವಾಸಾನುಭವಗಳು ಸೇರಿದಂತೆ ವಿಭಿನ್ನ ವಿಷಯಗಳನ್ನು 100 ಯಾನಗಳಾಗಿ ವಿಂಗಡಿಸಿ ರಚಿಸಿರುವ ಈ ಕೃತಿಗೆ ಹಿರಿಯ ವಿದ್ವಾಂಸ, ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಮುನ್ನುಡಿ ಬರೆದಿದ್ದಾರೆ. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುಧಾಬಿ ಬೆನ್ನುಡಿ ನೀಡಿದ್ದಾರೆ. ಪ್ರಕಾಶಕರ ಪರವಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಆಶಯ ನುಡಿಗಳನ್ನಾಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ