ರಾಜಕೀಯ ಅಧ್ಯಯನಕ್ಕೊಂದು ಪಾಕ ಶಾಲೆ ಬೈಂದೂರು

Upayuktha
0

ಡುಪಿ ಜಿಲ್ಲಾ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಬೈಂದೂರಿಗೊಂದು ವಿಶೇಷತೆ ಇದೆ. ಜಿಲ್ಲಾ ಉಳಿದ ನಾಲ್ಕು ವಿಧಾನ ಸಭಾ ಕ್ಷೇತ್ರಗಳು ಉಡುಪಿ ಚಿಕ್ಕಮಗಳೂರು ಲೇೂಕ ಸಭಾ ಕ್ಷೇತ್ರದಲ್ಲಿ ಬರುವುದಾದರೆ ಬೈಂದೂರು ಮಾತ್ರ ಶಿವಮೊಗ್ಗ ಲೇೂಕಸಭಾ ಕ್ಷೇತ್ರದಲ್ಲಿ ಬರುವ ಕ್ಷೇತ್ರ. ಹಾಗಾಗಿ ರಾಜಕೀಯವಾಗಿ ಇದಕ್ಕೊಂದು ವಿಶೇಷ ಸ್ಥಾನಮಾನವಿದೆ.

ಬೈಂದೂರಿನ ಪಕ್ಷ ರಾಜಕೀಯ ನೇೂಡಿದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಸರಿ ಸಮಾನವಾಗಿ ಮಣೆ ಹಾಕಿದ ಕ್ಷೇತ್ರ. ಜಾತಿ ಲೆಕ್ಕಾಚಾರದಲ್ಲಿ ಕೂಡಾ ಪೂಜಾರಿ ಬಂಟರು ಸೇರಿಗಾರ ಮೊಗವೀರ ಮತದಾರರ ಪ್ರಾಬಲ್ಯ ಹೊಂದಿರುವ ಕ್ಷೇತ್ರವೂ ಹೌದು. ಇಲ್ಲಿ ಬಂಟರು, ಬ್ರಾಹ್ಮಣರು, ಪೂಜಾರಿ, ಸೇರಿಗಾರರು ಈ ಕ್ಷೇತ್ರವನ್ನು ಪ್ರತಿನಿಧಿಸಿದ ಉದಾಹರಣೆಗಳು ನಮ್ಮ ಮುಂದಿದೆ.


ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಹಣಾಹಣಿ. ಇತ್ತೀಚಿನ ಕಾಲ ಘಟ್ಟದಲ್ಲಿ ಪೂಜಾರಿ ಬಂಟರ ಅಭ್ಯರ್ಥಿಗಳು ತಮ್ಮ ಸಾಮಥ್ಯ೯ ಮುಂದಿಟ್ಟು ಚುನಾವಣಾ ಕಣದಲ್ಲಿ ಹೇೂರಾಟ ನಡೆಸಿಕೊಂಡು ಬಂದಿದ್ದಾರೆ. ಅಂದರೆ ಇಲ್ಲಿ ರಾಜಕೀಯವನ್ನೇ ತಮ್ಮ  ರಕ್ತದಲ್ಲಿ ತುಂಬಿಕೊಂಡವರು ಸೆಣಸಾಡಿದ್ದಾರೆ ಅನ್ನುವುದು ಅಷ್ಟೇ ಸತ್ಯ. ಆದರೆ ಈ ಬಾರಿ ಸ್ವಲ್ಪ ಭಿನ್ನವಾದ ವ್ಯಕ್ತಿತ್ವ ಸಿದ್ಧಾಂತದ ಹಿನ್ನೆಲೆಯಲ್ಲಿ ರಾಜಕೀಯ ಪರಿಸ್ಥಿತಿ ನಿರ್ಮಾಣ ವಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇದು ರಾಜಕೀಯ ಅಧ್ಯಯನಶೀಲರ ಮೆದುಳಿಗೆ ಮೇವು ನೀಡುವ ಹೊಸ ಬೆಳವಣಿಗೆ ಕೂಡ.


ಇಂದಿನ ಕಾಂಗ್ರೆಸ್‌ನ ಅಭ್ಯರ್ಥಿ ಹೆಚ್ಚು ಕಾಲ ಶಾಸಕರಾಗಿ ರಾಜಕೀಯವಾಗಿ ಜನಜನಿತವಾಗಿ ಗುರುತಿಸಿ ಕೊಂಡವರು. ಇವರ ಹೇೂರಾಟದ ಬಗ್ಗೆ ಆಗಲಿ ಸೇೂಲು ಗೆಲುವಿನ ಬಗ್ಗೆ ನಾವು ಚಚೆ೯ಮಾಡ ಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಇಲ್ಲ.


ಆದರೆ ಬಿಜೆಪಿ ಈ ಬಾರಿ ಕಣಕ್ಕೆ ಇಳಿಸಿದ ಅಭ್ಯರ್ಥಿ ನಮ್ಮ ರಾಜಕೀಯ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡುವ ವ್ಯಕ್ತಿ ಅನ್ನುವುದು ಕುತೂಹಲದ ಪ್ರಶ್ನೆ.


ವೃತ್ತಿ ಪರ ಸ್ಥಳೀಯ ರಾಜಕೀಯದ ಜಂಜಾಟದ ಪರಿಧಿಯಿಂದ ತೀರ ದೂರವಿರವಿದ್ದು ತಾನು ನಂಬಿದ ರಾಷ್ಟ್ರೀಯತೆಯ ಸಿದ್ಧಾಂತಗಳನ್ನು ತನ್ನ ಪ್ರತಿ ಬೇವರಿನ ಹನಿಯಲ್ಲಿ ಬದುಕಿದವರು. ಅತ್ಯಂತ ಸರಳ ಸಜ್ಜಿನಿಕೆಯ ಪರಿಸರದಲ್ಲಿಯೇ ಇಡಿ ತಮ್ಮ ಬದುಕನ್ನು ಸಮಪ೯ಣೆ ಮಾಡಿಕೊಂಡು ಯಾವುದೇ ರಾಜಕೀಯ ಅಭಿಲಾಷೆಗಳಿಗೆ ಮನಸ್ಸು ಹರಿಸದೇ ಇರುವ ಬರಿಗಾಲಿನಲ್ಲಿಯೇ ನಡೆದಾಡುವ ಸಂತನೆನ್ನಿಸಿಕೊಂಡು ಮೂಲತಃ ಬೈಂದೂರಿನ ಮಣ್ಣಿನ ನೀರಿನಲ್ಲಿಯೇ ಬೆಳೆದ ಗುರುರಾಜ ಗಂಟಿಹೊಳೆಯವರ ಹೆಸರನ್ನು ರಾಜಕೀಯ ವಲಯದಲ್ಲಿ ಕೇಳಿಸಿಕೊಂಡಿದ್ದು ತೀರ ಕಡಿಮೆ. ಆದರೂ ಕೂಡಾ ಒಂದು ರಾಷ್ಟ್ರೀಯ ಪಕ್ಷ ತನ್ನ ಅಭ್ಯರ್ಥಿಯನ್ನಾಗಿ ಅತ್ಯಂತ ಕಠಿಣ ಸವಾಲಿರುವ ಸ್ಥಳದಲ್ಲಿಯೇ ಅಭ್ಯರ್ಥಿಯನ್ನಾಗಿ ಗುರುತಿಸಿದೆ ಅಂದರೆ ಬಿಜೆಪಿಗೆ ತನ್ನ ಗೆಲುವಿನ ಆತ್ಮ ವಿಶ್ವಾಸವೇನು? ಅನ್ನುವುದೇ ನಮ್ಮಮುಂದಿರುವ ದೊಡ್ಡ ಪ್ರಶ್ನೆ.


ಗಂಟಿಹೊಳೆಗೆ ಇರುವ ಪೂರಕ ಅಂಶಗಳು:

1. ಇವರು ಕೂಡಾ ಇದೇ ಪರಿಸರದಲ್ಲಿ ಹುಟ್ಟಿ ಬೆಳೆದ ಬಡತನದ ಅನುಭವ ಹೊಂದಿರುವ  ಸ್ಥಳೀಯ ಸಮಸ್ಯೆಗಳ ಅರಿವಿರುವ ಅಭ್ಯರ್ಥಿ.

2. ಬಿಜೆಪಿ ಅನ್ನುವುದಕ್ಕಿಂತಲೂ ರಾಷ್ಟ್ರೀಯತೆಯ ಸಿದ್ಧಾಂತ ಒಡಲಿನಲ್ಲಿ ತುಂಬಿ ಕೊಂಡು ಆರ್.ಎಸ್.ಎಸ್. ಗರಡಿಯಲ್ಲಿ ಬೆಳೆದ ಒಬ್ಬ ಅಪರೂಪದ ವ್ಯಕ್ತಿ.

3. ಇವರ ಅಭ್ಯರ್ಥಿತನಕ್ಕೆ ಉಸಿರಾಗಿ ನಿಂತವರು ಬಿಜೆಪಿಯ ಸಂತೇೂಷಜಿ ಅನ್ನುವುದರಲ್ಲಿ ಎರಡು ಮಾತಿಲ್ಲ.

4. ಈ ಸಾಮಾನ್ಯ ಬಡ ಸಂತ ಕಾರ್ಯಕತ೯ನನ್ನು ಗೆಲ್ಲಿಸಲೇ ಬೇಕಾದ ಅನಿವಾರ್ಯತೆ ಯಡಿಯೂರಪ್ಪ ಮತ್ತು ಅವರ ಮಕ್ಕಳಿಗೆ ಇದೆ. ಅದಕ್ಕೂ ಒಂದು ರಾಜಕೀಯ ಹಿತಾಸಕ್ತಿ ಇದೆ. ಯಡಿಯೂರಪ್ಪನವರ ಮಗ ರಾಘವೇಂದ್ರರ  ಕ್ಷೇತ್ರಕ್ಕೆ ಜೀವ ತುಂಬುವ ಭಾಗವೆಂದರೆ ಬೈಂದೂರು ಹೌದು. ಹಾಗಾಗಿ ಈ ಬಾಬ್ತಿನ ತನು ಮನ ಧನದ ನಿವಾರಣೆ ಖಂಡಿತವಾಗಿಯೂ ಇವರ ಮೇಲಿದೆ ಅನ್ನುವುದನ್ನು ಪ್ರತ್ಯೇಕವಾಗಿ ಹೇಳ ಬೇಕಾಗಿಲ್ಲ. 5. ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗಿಂತಲೂ ಹೆಚ್ಚಿನ ಜವಾಬ್ದಾರಿ ಸಂಘ ವಿಸ್ತಾರಕರಿಗೆ ಇದೆ. ಇದು ಅವರ ಗೌರವದ ಪ್ರಶ್ನೆ. ಇಲ್ಲಿ ಅಭ್ಯರ್ಥಿ ಸೇೂತರೆ ಅದು ಬಿಜೆಪಿಯ ಸೇೂಲು ಅನ್ನುವುದಕ್ಕಿಂತ ಸಂಘ ಪರಿವಾರದ ಸೇೂಲು ಅನ್ನುವುದೇ ಬಿಂಬಿತವಾಗುತ್ತದೆ.


ಗಂಟಿ ಹೊಳೆಗೆ ಇರುವ ಮಾರಕ ಅಂಶಗಳೇನು:

1. ಕಾಂಗ್ರೆಸ್ಸೇ ಪ್ರಬಲ ವಿರೇೂಧಿ ಅನ್ನುವುದಕ್ಕಿಂತ ರಾಜಕೀಯವನ್ನೆ ಉದ್ಯೋಗ ಮಾಡಿಕೊಂಡ ಬಿಜೆಪಿಯ ನಾಯಕರುಗಳು ಕಾರ್ಯಕರ್ತರ ಸಹಕಾರ ಮನಸ್ಪೂತಿ೯ಯಾಗಿ ಬರಬಹುದೇ? ಅನ್ನುವುದು ಬಹು ದೊಡ್ಡ ಪ್ರಶ್ನೆ.

2. ಇದಾಗಲೇ ಬೈಂದೂರು ಕ್ಷೇತ್ರದಲ್ಲಿ ಅಭ್ಯರ್ಥಿತನದ ಆಕಾಂಕ್ಷಿಗಳು ತಮ್ಮ ಮುಂದಿನ ರಾಜಕೀಯದ ಭವಿಷ್ಯ ಏನು ಅನ್ನುವ ಚಿಂತೆ ಕಾಡುವುದು ಸಹಜ.

3. ಇನ್ನೂ ಕಾಂಗ್ರೆಸ್ ಸಹಜವಾಗಿ ಸಂಪ್ರದಾಯಿಕ ಎದುರಾಳಿ. ಅವರಿಗೂ ಒಂದಿಷ್ಟು ಜಾತಿಯ ಬೆಂಬಲವೂ ಇದೆ. ಇದು ತನ್ನ ಕೊನೆಯ ಚುನಾವಣಾ ಕಣ ಅನ್ನುವ ಅನುಕಂಪವೂ ಇದೆ.

4. ಬೈಂದೂರಿನ ಮಟ್ಟಿಗೆ ತೀರ ಪರಿಚಿತರು ಹೌದು.

5. ಬೈಂದೂರು ಕೂಡಾ ಕಟ್ಟು ಹಿಂದುತ್ವದ ಅಲೆಯ ನೆಲವೂ ಅಲ್ಲ.

6. ರಾಜ್ಯ ಸರ್ಕಾರದ ವಿರುದ್ಧ ಆಡಳಿತ ಆಲೆ ಲಘುವಾಗಿ ಬೀಸುವಾಗ ಬಿಜೆಪಿಯ ಹೊಸ ಪ್ರಯೇೂಗ ಕಾಂಗ್ರೆಸ್ಗೆ ವರದಾನವೂ ಹೌದು.

7. ಹೊಟ್ಟೆ ತುಂಬಿದ ಮತದಾರರು ಭಾವನಾತ್ಮಕ ಚಿಂತನೆಯಲ್ಲಿ ಇರುತ್ತಾನೆ ಬಿಟ್ಟರೆ ಹಸಿದಿರುವವರು ದಿನ ನಿತ್ಯದ ಚಿಂತೆಯಲ್ಲಿ ಚಂಡಿ ಬಟ್ಟೆ ಹೊಟ್ಟೆಗೆ ಕಟ್ಟಿ ಕೊಂಡು ಮಲಗಿರುತ್ತಾನೆ. ಇವರನ್ನು ಮತ ಕಟ್ಟಗೆ ತರುವುದು ಸುಲಭ ಸಾಧ್ಯವಲ್ಲ.


ತೀರ್ಮಾನ:

ಈ ಹೊಸ ಪ್ರಯೇೂಗದಲ್ಲಿ ಹೆಚ್ಚು ಆಸಕ್ತಿ ವಹಿಸಿರುವುದು ಬಿಜೆಪಿ ಅನ್ನುವುದಕ್ಕಿಂತ ಸಂಘದ ಹಿತಾಸಕ್ತಿಯೂ ಇದೆ. ಹಿಂದುತ್ವದ ಜಿಲ್ಲೆ ಅನ್ನಿಸಿಕೊಂಡ ಉಡುಪಿಯ ಉತ್ತರ ಭಾಗದಲ್ಲಿಯೇ ಇದಕ್ಕೆ ಸರಿಯಾದ ಉತ್ತರ ಸಿಕ್ಕಿದರೆ ಮತ್ತೆ ಇದನ್ನು ನಿಧಾನವಾಗಿ ಉಳಿದ ಭಾಗಗಳಿಗೂ ಪರಿಚಯಿಸ ಬಹುದು ಅನ್ನುವ ದೂರದರ್ಶಿತ್ವದ ಚಿಂತನೆಯೂ ಇರ ಬಹುದು. ಮತದಾರರು ಹೇಗೆ ಸ್ಪಂದಿಸುತ್ತಾರೆ ಅನ್ನುವುದನ್ನು ಕಾದು ನೇೂಡ ಬೇಕಾಗಿದೆ.


-ವಿಶ್ಲೇಷಣೆ: ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top