ಮಂಗಳೂರು: ಸಂಚಾರಿ ನಿಯಮಗಳನ್ನು ಜನರಿಗೆ ಮನದಟ್ಟು ಮಾಡಿ ನಿಯಮಗಳನ್ನು ಪಾಲಿಸುವಂತೆ ಮನ ಪರಿವರ್ತನೆ ಮಾಡುವಲ್ಲಿ ಗೃಹ ರಕ್ಷಕರಿಗೆ ಹೆಚ್ಚಿನ ಹೊಣೆಗಾರಿಕೆ ಇದೆ. ಜನರಿಗೆ ನಿಯಮಗಳ ಬಗ್ಗೆ ಸಾವಧಾನದಿಂದ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಗೃಹರಕ್ಷರದ್ದು ಎಂದು ಚೀಫ್ ಟ್ರಾಫಿಕ್ ವಾರ್ಡನ್ ಫ್ರೋ ಸುರೇಶ್ ನಾಥ್ ಅಭಿಪ್ರಾಯ ಪಟ್ಟರು.
ಗೃಹರಕ್ಷಕರಿಗೆ ನಡೆಯುತ್ತಿರುವ ಹತ್ತು ದಿನಗಳ ಮೂಲ ತರಬೇತಿಯ ಅಂಗವಾಗಿ ದಿನಾಂಕ ಏ. 16 ರ ಭಾನುವಾರದಂದು ನಗರದ ನಂತೂರುನಲ್ಲಿರುವ ಶ್ರೀ ಭಾರತೀ ಕಾಲೇಜು ಆವರಣದಲ್ಲಿ ಸಂಚಾರಿ ನಿಯಮಗಳ ಪಾಲನೆ ವಿಚಾರದಲ್ಲಿ ಗೃಹ ರಕ್ಷಕರಿಗೆ ಮಾಹಿತಿ ಮತ್ತು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಗೃಹ ರಕ್ಷಕದಳದ ಸಮಾದೇಷ್ಟ ಡಾ. ಮುರಲಿ ಮೋಹನ್ ಚೂಂತಾರು, ಉಪ ಸಮಾದೇಷ್ಟ ರಮೇಶ್ ಉಪಸ್ಥಿತರಿದ್ದರು. ಸುಮಾರು 70 ಗೃಹ ರಕ್ಷಕರು ಹಾಜರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ