ಪುತ್ತೂರು: ಕೃಷಿ ಯಂತ್ರಮೇಳದ ಭಾಗವಾಗಿ ರೇಡಿಯೋ ಪಾಂಚಜನ್ಯದಿಂದ ಕೃಷಿ ರಸಪ್ರಶ್ನೆ ಫೆ.12ರಂದು

Upayuktha
0


ಪುತ್ತೂರು: ಫೆಬ್ರವರಿ 10ರಿಂದ 12ರ ವರೆಗೆ ನಡೆಯಲಿರುವ 5ನೇ ಬೃಹತ್‌ ಕೃಷಿ ಯಂತ್ರ ಮೇಳ ಮತ್ತು ಕನಸಿನ ಮನೆ 2023 ಅಂಗವಾಗಿ ರೇಡಿಯೋ ಪಾಂಚಜನ್ಯ 90.8 ಎಫ್‌ಎಂ ನೇತೃತ್ವದಲ್ಲಿ ಫೆಬ್ರವರಿ 12ರಂದು ಬೆಳಗ್ಗೆ 9 ಗಂಟೆಗೆ ಕೃಷಿಕ ಬಾಂಧವರಿಗಾಗಿ ಕೃಷಿ ರಸಪ್ರಶ್ನೆ ಆಯೋಜಿಸಲಾಗಿದೆ. 

15 ಮಂದಿ ನುರಿತ ಪ್ರಸಿದ್ಧ ಕೃಷಿಕರಿಂದ ಅನುಭವದ ಪ್ರಶ್ನಾವಳಿ ಆಧರಿಸಿ ಹಿರಿಯ ಕೃಷಿಕ ಮರಿಕೆ ಸದಾಶಿವ ಭಟ್‌ ಅವರ ಮಾರ್ಗದರ್ಶನದಲ್ಲಿ ಈ ರಸಪ್ರಶ್ನೆ ನಡೆಸಲಾಗುತ್ತದೆ. ಭಾಗವಹಿಸುವ ಕೃಷಿಕರಿಗೆ ಯಾವುದೇ ವಯೋಮಿತಿ ನಿಗದಿಪಡಿಸಿಲ್ಲ.

ವಿಜೇತರಿಗೆ ಪ್ರಥಮ ಬಹುಮಾನವಾಗಿ ಚಿನ್ನದ ನಾಣ್ಯ, ದ್ವಿತೀಯ ಮತ್ತು  ಬಹುಮಾನಗಳಾಗಿ ಬೆಳ್ಳಿಯ ನಾಣ್ಯಗಳನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. 

ಹೆಚ್ಚಿನ ಮಾಹಿತಿಗಾಗಿ 9901336916, 8050809885 ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಕ್ಯಾಂಪ್ಕೋ ನಿಯಮಿತ, ಮಂಗಳೂರು, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎ.ಆರ್‌.ಡಿಎಫ್‌), ವಿವೇಕಾನಂದ ಕಾಲೇಜ್ ಆಫ್‌ ಎಂಜಿನಿಯರಿಂಗ್‌  & ಟೆಕ್ನಾಲಜಿ, ಪುತ್ತೂರು ಇವರ ಸಹಯೋಗದಲ್ಲಿ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಈ ಕೃಷಿ ಯಂತ್ರ ಮೇಳ ಮತ್ತು ಕನಸಿನ ಮನೆ 2023 ನಡೆಯಲಿದೆ. ಇದಕ್ಕೆ ಭರದಿಂದ ಸಿದ್ಧತೆಗಳು ಸಾಗಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top