ಗಂಗಾವತಿ: ಗಂಗಾವತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದನಕದೊಡ್ಡಿ ಗ್ರಾಮದಲ್ಲಿ ಸಣ್ಣ ನಿಂಗಪ್ಪ ಎನ್ನುವವರ ಕಬ್ಬಿನ ಹೊಲಕ್ಕೆ ವಿದ್ಯುತ್ ಅವಘಡದಿಂದ ಆಕಸ್ಮಿಕ ವಾಗಿ ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿದು ಜನಪ್ರಿಯ ಶಾಸಕರಾದ ಪರಣ್ಣ ಮುನವಳ್ಳಿ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ನೊಂದ ರೈತನಿಗೆ ಆತ್ಮಸ್ಥೈರ್ಯ ತುಂಬಿ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರವಿಕುಮಾರ್, ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ದನಕದೊಡ್ಡಿ, ಗ್ರಾ ಪ ಮಾಜಿ ಅಧ್ಯಕ್ಷರಾದ ಬಂಡೆಪ್ಪ ಕಟ್ಟಿ, ಗ್ರಾಮ ಪ ಸದಸ್ಯರಾದ ಬಸವರಾಜ ಪಿ, ಯಮನೂರಪ್ಪ ಕೊಳ್ಳಿ, ಗ್ರಾಮ ಪಂ ಮಾಜಿ ಸದಸ್ಯರಾದ ಲಕ್ಷ್ಮಣ ಭೋವಿ, ಹುಸೇನ್ ಹಿರೇಮನಿ, ಹನುಮಂತಪ್ಪ ಕೋರಿ, ಹಿರಿಯರಾದ ಸಣ್ಣ ಕಲ್ಲಪ್ಪ ಭೀಮನೂರು ಹಾಗೂ ಅಕ್ಕ ಪಕ್ಕದ ರೈತರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ