ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ದಶಲಕ್ಷಣ ಪರ್ವ ಆಚರಣೆಯ ಅಂಗವಾಗಿ ಅಷ್ಟವಿಧಾರ್ಚನೆ ಪೂಜೆ
ಉಜಿರೆ: ಜೈನ ಧರ್ಮದ ಸಂಪ್ರದಾಯದಂತೆ ಭಾದ್ರಪದ ಪಂಚಮಿಯಿಂದ ಹುಣ್ಣಿಮೆ ವರೆಗೆ ಅಂದರೆ ಸೆ. 1ರಿಂದ 10ರ ವರೆಗೆ ಎಲ್ಲಾ ಬಸದಿಗಳಲ್ಲಿ ಆತ್ಮನಿಗೆ ಅಂಟಿದ ಸಕಲ ಪಾಪ ಕರ್ಮಗಳ ಕೊಳೆ ಕಳೆದು ಆತ್ಮಕಲ್ಯಾಣದೊಂದಿಗೆ ಮೋಕ್ಷ ಪ್ರಾಪ್ತಿಗಾಗಿ ದಶಲಕ್ಷಣ ಪರ್ವ ಆಚರಿಸುತ್ತಾರೆ.
ಉತ್ತಮ ಕ್ಷಮಾ, ಉತ್ತಮ ಮಾರ್ದವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ಆಕಿಂಚನ್ಯ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ ಮತ್ತು ಉತ್ತಮ ಬ್ರಹ್ಮಚರ್ಯ ಎಂಬ ದಶಧರ್ಮಗಳನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ. ಜಪ.ತಪ, ಧ್ಯಾನ, ಸ್ವಾಧ್ಯಾಯ ಅಷ್ಟವಿಧಾರ್ಚನೆ ಪೂಜೆ, ಉಪವಾಸ ಹಾಗೂ ವೃತ-ನಿಯಮಗಳ ಪಾಲನೆ ಮಾಡುತ್ತಾರೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ