ಬೆಂಗಳೂರು: ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜದ ವಿನಂತಿ ಮೇರೆಗೆ ಶೃಂಗೇರಿ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರು 12ನೇ ಜೂನ್ ಭಾನುವಾರ ಬೆಳಗ್ಗೆ 9.00 ಘಂಟೆಗೆ ಪಾದಪೂಜೆಗೆ ಸಮ್ಮತಿ ನೀಡಿದ್ದಾರೆ.
ಸ್ಥಳ: ಶ್ರೀ ಶಂಕರ ಮಠ ಪರಿಸರ, ಬಸವನ ಗುಡಿ, ಬೆಂಗಳೂರು
ಕಾರ್ಯಕ್ರಮ ಈ ರೀತಿ ಇದೆ:
9:00 ಘಂಟೆಯಿಂದ ಪಾದಪೂಜೆ
11:00 ಘಂಟೆಗಯಿಂದ ಗುರುಗಳ ಆಶೀರ್ವಚನ
12 ಘಂಟೆಯಿಂದ ಪ್ರಸಾದ ಭೋಜನ
ಪಾದಪೂಜೆ ₹1000 / ಭಿಕ್ಷಾವಂದನೆ ₹500 / ವಿಶೇಷ ಪಾದಪೂಜೆ ₹2000 ರೂ ಆಗಿರುತ್ತದೆ.
ಪಾದಪೂಜೆ ಮಾಡಿಸುವ ಭಕ್ತಾದಿಗಳು ತಮ್ಮ ಹೆಸರು, ಹಣ, ಮೊಬೈಲ್ ನಂಬರ್ ಅನ್ನು 11ನೇ ತಾರೀಕು 10 ಘಂಟೆಯ ಒಳಗೆ ಶ್ರೀ ಅಶೋಕ ಮುಂಡಕಾನ -98450-95460 ತಲುಪಿಸಿದರೆ ಮರುದಿನ 9 ಘಂಟೆಗೆ ಬಂದ ಕೂಡಲೇ ರಶೀದಿ ಪಡೆದು ಸಮಯದ ಉಳಿತಾಯ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಕರಾಡ ಬಂಧುಗಳು ನೂರಕ್ಕೆ ಕಡಿಮೆ ಆಗದಂತೆ ಪಾದಪೂಜೆ ಮಾಡಿಸಿ ಶಾರದಾಂಬೆಯ, ಶ್ರೀ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಸಮಿತಿ ಮನವಿ ಮಾಡಿದೆ.
ವಿಶೇಷ ಸೂಚನೆ:
1. ಶ್ರೀ ಮಠಕ್ಕೆ ಬರುವಾಗ ಫಲ ತಾಂಬೂಲದೊಂದಿಗೆ ಬರುವುದು.
2. ಮಠದಲ್ಲಿ ವಸ್ತ್ರಸಂಹಿತೆ ಪುರುಷರು ಪಂಚೆ, ಶಲ್ಯ ಮಹಿಳೆಯರು ಸೀರೆಯನ್ನು ಧರಿಸಿ ಬರುವುದು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ