ಕಸಾಪ ಕೇರಳ ಗಡಿನಾಡ ಘಟಕದ ತ್ರಿಂಶತಿ ವರ್ಷಾಚರಣೆ

Upayuktha
0

ಮೀಯಪದವು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ತ್ರಿಂಶತಿ ವರ್ಷಾಚರಣೆಯನ್ನು ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಖ್ಯಾತ ಸಾಹಿತಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ  ಸಂಘದ ಗೌರವಾಧ್ಯಕ್ಷ ಡಾ.ರಮಾನಂದ ಬನಾರಿ ಅವರು ಉದ್ಘಾಟಿಸಿದರು.


ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸಿದ್ದರು.


ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಆತ್ಮಕಥನ ದುಡಿತವೇ ನನ್ನ ದೇವರು ಕೃತಿಯ ಮೂರನೇ ಆವೃತ್ತಿಯ ಬಿಡುಗಡೆ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ನಡೆಯಿತು.


ಕಯ್ಯಾರರ ಪುತ್ರ, ಹಿರಿಯ ಪ್ರಾಧ್ಯಾಪಕರಾದ ಡಾ.ಪ್ರಸನ್ನ ರೈ, ಅಳಿಯ ಭುವನಪ್ರಸಾದ ಹೆಗ್ಡೆ, ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಡಾ.ವರದರಾಜ ಚಂದ್ರಗಿರಿ ಅವರು ದುಡಿತವೇ ನನ್ನ  ದೇವರು ಕೃತಿಯ ಅವಲೋಕನ ಮಾಡಿದರು. ವಿಶಾಲಾಕ್ಷ ಪುತ್ರಕಳ ಅವರು ಉಪನ್ಯಾಸ ಮಾಡಿದರು.


ಮಂಜೇಶ್ವರ ಉಪಜಿಲ್ಲೆಯ 50 ರಷ್ಟು ವಿದ್ಯಾಲಯಗಳ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳನ್ನು ದಾನ ಮಾಡಿದ  ಬಿ.ಆರ್ ನರಸಿಂಹ ರಾವ್ ಉಡುಪಿ ಮತ್ತು ರಮೇಶ ಪ್ರಭು ಉಡುಪಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ವತಿಯಿಂದ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಭಿನಂದಿಸಲಾಯಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top