‘ವಿಕಸನ ಟಿವಿ’ಗೆ ಶಿಕ್ಷಣ ಸಚಿವರ ಭೇಟಿ

Upayuktha
0



ಪುತ್ತೂರು ನ.3: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ, ವಿವೇಕಾನಂದ ಮಹಾವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಮುನ್ನಡೆಸುತ್ತಿರುವ ವಿವೇಕಾನಂದ ಮಲ್ಟಿಮೀಡಿಯಾ ಸ್ಟುಡಿಯೋಗೆ ಶಿಕ್ಷಣ ಸಚಿವರು  ಬುಧವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಂ.ಸಿ.ಜೆ. ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ, ವಿಭಾಗದ ಯುಟ್ಯೂಬ್ ವಾಹಿನಿ 'ವಿಕಸನ ಟಿವಿ'ಗಾಗಿ ಶಿಕ್ಷಣ ಸಚಿವರ ಸಂದರ್ಶನ ನಡೆಸಿದರು.

ಈ ಸಂದರ್ಭ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್., ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್, ವಿವೇಕಾನಂದ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಶ್ರೀಧರ್ ಹೆಚ್. ಜಿ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಆರ್. ನಿಡ್ಪಳ್ಳಿ, ಉಪನ್ಯಾಸಕರಾದ ಸೀಮಾ ಪೋನಡ್ಕ, ಭವಿಷ್ಯ ಶೆಟ್ಟಿ, ಭರತ್ ಕೊಲ್ಪೆ, ವಿವೇಕಾನಂದ ಮಲ್ಟಿ ಮೀಡಿಯ ಸ್ಟುಡಿಯೋ ದ ತಾಂತ್ರಿಕ ಸಹಾಯಕ ಸಂತೋಷ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


 Upayuktha


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top