ವಿಶ್ವ ಸೊಳ್ಳೆಗಳ ದಿನ– ಆಗಸ್ಟ್ 20

Upayuktha
0

ಜಗತ್ತಿನಾದ್ಯಂತ ಆಗಸ್ಟ್ 20ನ್ನು ವಿಶ್ವ ಸೊಳ್ಳೆಗಳ ದಿನ ಎಂದುಆಚರಿಸಲಾಗುತ್ತಿದೆ. ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಮನುಕುಲದ ಮಹೋನ್ನತಿಗೆ ಮಹತ್ತರ ಕೊಡುಗೆ ನೀಡಿ, 1902ರಲ್ಲಿ ವೈದ್ಯ ವಿಜ್ಞಾನಕ್ಕಾಗಿ ನೊಬೆಲ್ ಪ್ರಶಸ್ತಿ  ದೊರೆತ ಭಾರತೀಯ ಸಂಜಾತ ಬ್ರಿಟಿಷ್ ವೈದ್ಯ ಸರ್‌ ರೊನಾಲ್ಡ್‌ ರೋಸ್‌ ಅವರನ್ನು ಸ್ಮರಿಸುವ ಸುದಿನ. 1897ನೇ ಆಗಸ್ಟ್ 20ರಂದು ತಾನು ಮಾಡಿದ ಸಂಶೋಧನೆಗಳ ಮೂಲಕ ಸೊಳ್ಳೆಗಳಿಂದ ಮನುಷ್ಯನಿಗೆ ಮಲೇರಿಯಾ ಹರಡುತ್ತದೆ ಎಂದು ಜಗತ್ತಿಗೆ ಸಾರಿ ಹೇಳಿದ ಸುದಿನ. ಆ ಮಹಾನ್ ವ್ಯಕ್ತಿಯನ್ನು ಸ್ಮರಿಸುತ್ತಾ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮಾಡಿಸುವ ಸದುದ್ದೇಶದಿಂದ ವಿಶ್ವದಾದ್ಯಂತ ಆಗಸ್ಟ್ 20ರಂದು ವಿಶ್ವ ಸೊಳ್ಳೆಗಳ ದಿನ ಎಂದು ಆಚರಿಸಲಾಗುತ್ತಿದೆ.


ಒಂದು ಕಾಲದಲ್ಲಿ ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಮಳೆಗಾಲದಲ್ಲಿ ಸೊಳ್ಳೆಗಳದ್ದೇ ಕಾರುಬಾರು. ಆ ಕಾರಣಕ್ಕಾಗಿಯೇ ಬೇಸಿಗೆಯಲ್ಲಿ ಸೆಕೆಯ ಕಾಟ ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಎಂದು ಹೇಳಲಾಗುತ್ತಿದೆ. ಏನೇ ಇದ್ದರೂ ಮಳೆಗಾಲದಲ್ಲಿ ಸೊಳ್ಳೆಗಳಿಗೆ ಪರ್ವಕಾಲ. ಅವುಗಳು ಹೆಚ್ಚಿನ ಸಂತಾನೋತ್ಪತ್ತಿ ಮಾಡುವುದು ಮಳೆಗಾಲದಲ್ಲಿಯೇ. ಸೊಳ್ಳೆಗಳ ಆಟ ಆರ್ಭಟ ಹೆಚ್ಚಾಗಿ ಕಾಣ ಸಿಗುವುದು ಮಳೆಗಾಲದಲ್ಲಿಯೇ. ಬೇಸಿಗೆಯಲ್ಲಿ ಕಾಣದಂತೆ ಮಾಯವಾಗುವ ಸೊಳ್ಳೆಗಳು ಮಳೆ ಬಂದು ಅಲ್ಲಿಲ್ಲಿ ನೀರು ನಿಂತೊಡನೆಯೇ ತಮ್ಮ ರುದ್ರ ನರ್ತನವನ್ನು ಮನಕುಲದ ಮೇಲೆ ತೋರಿಸಿಬಿಡುತ್ತದೆ. ಸೊಳ್ಳೆಗಳಿಗೆ ಮನುಷ್ಯನ ರಕ್ತವೆಂದರೆ ಅತೀವ ಪ್ರೀತಿ. ಮನುಷ್ಯನ ರಕ್ತವನ್ನು ಹೀರಿ ರೋಗಗಳನ್ನು ಹರಡಿಸುವ ಮನೆಮುರುಕು ಕೆಲಸ, ಉಂಡ ಮನೆಗೆ ದ್ರೋಹ ಬಗೆಯ ಕಾರ್ಯವನ್ನು ಸೊಳ್ಳೆಗಳು ಸದ್ದಿಲ್ಲದೆ ಮಾಡುತ್ತದೆ. ಮಲೇರಿಯಾ, ಆನೆಕಾಲು ರೋಗ, ಡೆಂಘಿ, ಚಿಕೂನ್‍ಗೂನ್ಯ, ಮೆದುಳು ಜ್ವರ ಮುಂತಾದ ಕಾಯಿಲೆಗಳಿಗೆ ಮುನ್ನುಡಿ ಬರೆಯುವ ಕೆಲಸ ಸೊಳ್ಳೆಗಳು ಸದ್ದಿಲ್ಲದೇ ಮಾಡುತ್ತಿರುತ್ತದೆ. ಅನಾಫೆಲಿಸ್ ಹೆಣ್ಣು ಸೊಳ್ಳೆ, ಏಡಿಸ್ ಸೊಳ್ಳೆ ಮತ್ತು ಕ್ಯೂಲೆಕ್ಸ್ ಸೊಳ್ಳೆ ಇವುಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರುಗಳು. ಅನಾಫೆಲೀಸ್ ಮಲೇರಿಯಾ ರೋಗಕ್ಕೆ ನಾಂದಿ ಹಾಡಿದಲ್ಲಿ ಏಡಿಸ್ ಸೊಳ್ಳೆ ಡೆಂಘಿ ಮತ್ತು ಚಿಕೂನ್‍ಗೂನ್ಯ ರೋಗಕ್ಕೆ ದಾರಿ ಮಾಡಿಕೊಡುತ್ತದೆ. ಕ್ಯೂಲೆಕ್ಸ್ ಸೊಳ್ಳೆಯಿಂದ ಮೆದುಳು ಜ್ವರ ಮತ್ತು ಆನೆಕಾಲು ರೋಗ ಹರಡುತ್ತದೆ.


ಮೂರ್ತಿ ಚಿಕ್ಕದಾದರೂ ಅಪಕೀರ್ತಿ ದೊಡ್ಡದು

ಸೊಳ್ಳೆಗಳು ದೇಹದ ಗಾತ್ರದಲ್ಲಿ ಬಹಳ ಚಿಕ್ಕದಾಗಿದ್ದರೂ, ಮನುಕುಲದ ಬಹುದೊಡ್ಡ ವೈರಿ.ನಮ್ಮ ಮನುಷ್ಯರಜೀವನ ನಾಟಕದಲ್ಲಿ ಖಳ ನಾಯಕಪಾತ್ರವನ್ನು ಯಶಸ್ವಿಯಾಗಿಯೇ ವರ್ಷನುವರ್ಷಗಳಿಂದ ನಿರ್ವಹಿಸುತ್ತಲೇಇದೆ. ಸೊಳ್ಳೆಗಳು ಮನುಷ್ಯನ ಏಳಿಗೆಗೆ ಬಹುದೊಡ್ಡಕಂಟಕವೆಂದರೂತಪ್ಪಲ್ಲ. ಜೀವನ ಕ್ರಿಕೇಟ್‍ ಆಟದಲ್ಲಿ ಮನುಷ್ಯನ ಕಡುವೈರಿ ಸೊಳ್ಳೆಗಳೇ. ಇವು ಯಾವತ್ತೂ ಹಾವು ಮುಂಗುಸಿಗಳು ಇದರ ನಡುವಿನ ವೈರಾತ್ವಕ್ಕೆ ಸರಿಸಾಟಿ ಇನ್ಯಾವುದೂ ಸಿಗಲಿಕ್ಕಿಲ್ಲ. ಮಲೇರಿಯಾ ಬಾಧಿಸಿದಷ್ಟು ತೊಂದರೆ, ಆರ್ಥಿಕ ನಷ್ಟ, ಸಾವು ನೋವು ಇನ್ನಾವುದೇ ರೋಗದಿಂದಲೂ ಬಂದಿಲ್ಲ ಆ ಕಾರಣದಿಂದಲೇ ಪಂದ್ಯಶ್ರೇಷ್ಠ  ಪ್ರಶಸ್ತಿಯನ್ನು  ಅನಾಫೆಲಿಸ್ ಹೆಣ್ಣು ಸೊಳ್ಳೆ ಅನಾಯಾಸವಾಗಿ ಯಾವತ್ತೂ ಪಡೆದುಕೊಳ್ಳುತ್ತಿದೆ. ಮಲೇರಿಯಾದ ಕಪಿಮುಷ್ಟಿಗೆ ಸಿಕ್ಕಿ ಮನುಕುಲ ವಿಲವಿಲನೆ ಒದ್ದಾಡಿದೆಎಂದರೂ ಅತಿಶಯೋಕ್ತಿತಲ್ಲ. ಒಂದು ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ ವರ್ಷಕ್ಕೆ 5 ಮಿಲಿಯನ್ ಮಂದಿ ಮಲೇರಿಯಾದಿಂದ ಬಳಲುತ್ತಿದ್ದಾರೆ. ಮಲೇರಿಯಾ ಮನುಕುಲವನ್ನು ಗಡಗಡನೆ ನಡುಗಿಸುತ್ತಲೇ ಇದೆ. ವಿಪರ್ಯಾಸವೆಂದರೆ ಮಲೇರಿಯಾ ಬಂದವರು ಚಳಿಜ್ವರದಿಂದ  ನಡುಗುತ್ತಿದ್ದರೆ, ರೋಗ ಬರದವರು ರೋಗವನ್ನು ತೀವ್ರತೆಯನ್ನು ನೆನೆಸಿ ನಡುಗುತ್ತಿದ್ದಾರೆ.  ಲಕ್ಷಾಂತರ ಮಂದಿ ಸಾಯುತ್ತಲೇ ಇದ್ದಾರೆ. ಹೊಸ ಹೊಸ ಔಷಧಿಗಳು ಹೊಸ ಅಣುಜೀವಿಗಳು ಹುಟ್ಟುತ್ತಲೇ ಇವೆ. ಸೊಳ್ಳೆಗಳ ರುದ್ರನರ್ತನ ಮಂದುವರಿಯುತ್ತಲೇ ಇದೆ. ಮಲೇರಿಯಾದ ಜೊತೆಗೆ ಇತರ ಡೆಂಘಿ, ಮೆದುಳು ಜ್ವರ, ಆನೆಕಾಲು ರೋಗ, ಚಿಕೂನ್‍ಗೂನ್ಯ ಜ್ವರ ಹೀಗೆ ಸೊಳ್ಳೆಗಳು ಒಂದಾದ ಮೇಲೊಂದರಂತೆ ಮನಕುಲದ ಮೇಲೆ ಪ್ರಹಾರ ಮಾಡುತ್ತಲೇ ಇದೆ.


ಜೀವಜಗತ್ತಿನ ಪ್ರಭೇದಗಳಲ್ಲಿ ಕೀಟÀ ಪ್ರಭೇದ ಬಹಳ ದೊಡ್ಡದುಇದರಲ್ಲಿ  ಸೊಳ್ಳೆಗಳದ್ದೇ ಸಿಂಹಪಾಲುಜಗತ್ತಿನಾದ್ಯಂತ ಜನಿಸುವ ಸೊಳ್ಳೆಗಳಲ್ಲಿ ಶೇಕಡಾ 80ರಿಂದ 90ರಷ್ಟು ಕಾಡುಗಳಲ್ಲಿ    ಹುಟ್ಟಿ ಬೆಳೆದು ಸಾಯುತ್ತದೆ. ಕೇವಲ 10ರಿಂದ 20ಶೇಕಡಾ ಮಾತ್ರÀ್ರ ಮನುಷ್ಯರಸಂಪರ್ಕಕ್ಕೆಬರುತ್ತದೆ. ಸಂತಸದ ವಿಚಾರವೆಂದರೆ ಈ ಶೇಕಡಾ 10ರಲ್ಲಿ,  ಕೇವಲ ನೂರಲ್ಲಿಒಂದೆರಡುಸೊಳ್ಳೆಗಳಿಗೆ ಮಾತ್ರ ಮಾನವನರಕ್ತಹೀರುವ ಅವಕಾಶ ದೊರಕುತ್ತದೆ. ಎಲ್ಲಾ ಸೊಳ್ಳೆಗಳಿಗೂ ಮನುಷ್ಯನರಕ್ತಹೀರುವ ಅವಕಾಶ ದೊರೆತಲ್ಲಿ ನಮ್ಮಉಹೆಗೂ ನಿಲುಕದ ರೋಗಗಳು ಹುಟ್ಟಬಹುದು ಮತ್ತು ಹರಡ ಬಹುದು.


ಸೊಳ್ಳೆಗಳ ನಿಯಂತ್ರಣ ಹೇಗೆ?

ಕಾಡು ಬಿಟ್ಟು ನಾಡು ಸೇರಿದ ಸೊಳ್ಳೆಗಳಿಗೆ ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ರಕ್ತವೇಆಹಾರಕಾಡುಕಡಿದುಕಾಂಕ್ರೀಟ್‍ನಾಡು ಮಾಡಿರುವ ಮನುಷ್ಯನಿಗೆ ಉಚಿತವಾಗಿ ದೊರಕಿದ ಸಂಗಾತಿಸೊಳ್ಳೆ ಎಂದರೂ ತಪ್ಪಲ್ಲ. ಕಾಡು ಮೇಡುಗಳಲ್ಲಿ ಹಾಯಾಗಿದ್ದ ಸೊಳ್ಳೆ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಾಗ ಪಾಪ ಹೊಟ್ಟೆ ಪಾಡಿಗಾಗಿ ಮನುಷ್ಯರ ರಕ್ತ ಹೀರಲೇಬೇಕು. ಇದು ನಾವೇ ಮಾಡಿಕೊಂಡ ಸ್ವಯಂಕೃತ ಅಪರಾಧ. ಹೆಣ್ಣುಸೊಳ್ಳೆಗಳಿಗೆ ಮೊಟ್ಟೆಇಡುವ ಸಮಯದಲ್ಲಿ ರಕ್ತ ಅತೀಅಗತ್ಯ. ಇದಕ್ಕಾಗಿ ಇವುಗಳು ಹೆಚ್ಚಾಗಿ ಮನುಷ್ಯನ ಮತ್ತುಇತರ ಪ್ರಾಣಿಗಳ ರಕ್ತಹೀರುತ್ತದೆ. ಈ ಪ್ರಕ್ರಿಯೆಯಲ್ಲಿ ರೋಗಿಗಳಿಂದ ಹೀರಿದ ರಕ್ತಗಳ ಜೊತೆಗೆ ರೋಗಿಯಲ್ಲಿನ ಜೀವಾಣುಗಳನ್ನು ಹೀರಿಕೊಂಡು ಬಿಡುತ್ತದೆ. ಆ ಬಳಿಕ ಈ ರೋಗಾಣುಯುಕ್ತ ಸೊಳ್ಳೆ ಆರೋಗ್ಯವಂತ ಮನುಷ್ಯರನ್ನು ಕಚ್ಚಿ ತನ್ನ ಎಂಜಲಿನಲ್ಲಿನ  ರೋಗಾಣುಗಳನ್ನು ಆತನಿಗೂ ಹಬ್ಬಿಸಿ ರೋಗವನ್ನು ಹರಡಿಸುತ್ತದೆ. ಹೀಗೆ ಸೊಳ್ಳೆಗಳು ರೋಗವಾಹಕ ಕೀಟಗಳಾಗಿ ಮನುಕುಲಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದೆ. ಸೊಳ್ಳೆ ನಿಯಂತ್ರಣಕ್ಕೆ ಈ ಕೆಳಗಿನ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.


1. ಪರಿಸರದ ಸ್ವಚ್ಛತೆಯನ್ನುಕಾಪಾಡಬೇಕು. ಪರಿಸರ, ನೀರು ಮತ್ತು ಗಾಳಿ ಕಲುಷಿತಗೊಳ್ಳದ ರೀತಿಯಲ್ಲಿ ನಾವು ಬದುಕಬೇಕಾದ ಅನಿವಾರ್ಯತೆ ಇದೆ ಮತ್ತು ಇತರ ಜೀವ ಸಂಕುಲಗಳನ್ನು ಬದುಕಲು ಬಿಡಬೇಕು

2. ಸೂಕ್ತ ನೀರಿನ ನಿರ್ವಹಣೆಗಾಗಿ ಬೇಕಾದ ವ್ಯವಸ್ಥೆ ಮಾಡಬೇಕು. ಉತ್ತಮಚರಂಡಿ   ವ್ಯವಸ್ಥೆ, ನದಿ, ಕೆರೆ, ತೊರೆ, ಕಾಲುವೆಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.

3. ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಮತ್ತುಕೈಗಾರಿಕಾ ಪ್ರದೇಶಗಳಲ್ಲಿ  ನೀರು ನಿಲ್ಲದಂತೆ ನೋಡಿಕೊಳ್ಳಬೇಕು ನಿಂತ ನೀರು ಸೊಳ್ಳೆಗಳಿಗೆ ಸ್ವರ್ಗವಿದ್ದಂತೆ.

4. ಎಲ್ಲೆಂದರಲ್ಲಿ ಕಸ ಎಸೆಯುವುದು, ತಿಪ್ಪೆಗುಂಡಿಗಳಲ್ಲಿ ನೀರು ನಿಲ್ಲುವುದು, ಘನ ಮತ್ತು ದ್ರವ್ಯ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದು ಇತ್ಯಾದಿಗಳಿಂದ  ಸೊಳ್ಳೆಗಳ ಸಂಖ್ಯೆ ವೃದ್ಧಿಸುತ್ತದೆ.

5. ಕೃತಕವಾಗಿ ನೀರು ನಿಲ್ಲುವ ಜಾಗಗಳಾದ ತೆಂಗಿನಚಿಪ್ಪು, ಹೂದಾನಿ, ಟಯರ್, ಖಾಲಿ ಡಬ್ಬ ಮತ್ತು ಕ್ಯಾನ್‍ಗಳು, ಅಕ್ವೇರಿಯಂ, ಏರ್‍ಕಂಡಿಷನರ್ ಮತ್ತುಏರ್‍ಕೂಲರ್ ಇತ್ಯಾದಿಗಳಲ್ಲಿ ಸೊಳ್ಳೆ ನಿಲ್ಲದಂತೆ ಮಾಡಿಕೊಳ್ಳಬೇಕು 

6. ಸೊಳ್ಳೆ ಮರಿಗಳನ್ನು ತಿನ್ನುವಗಪ್ಪಿ ಮೀನುಗಳನ್ನು ಬೆಳೆಸಿ ಸೊಳ್ಳೆಗಳ ನಿಯಂತ್ರಣ ಮಾಡಬೇಕು.

7. ಕೀಟ ನಾಶಕಗಳ ಬಳಕೆ ಸೊಳ್ಳೆ ನಿಯಂತ್ರಣ ಮಾಡುವ ಔಷಧಿಗಳ ಬಳಕೆ ಮುಂತಾದುವುಗಳಿಂದ ಸೊಳ್ಳೆಗಳ ಸಂತಾನಭಿವೃದ್ಧಿಆಗದಂತೆ ಮಾಡಬೇಕು.

8.  ಸೊಳ್ಳೆಗಳ ಬೆಳವಣಿಗೆಗೆ ಪೂರಕವಾಗುವಂತಹ ಯಾವುದೇ ರೀತಿಯ ಪರಿಸರ ಮಾಲಿನ್ಯವನ್ನ ತಡೆಗಟ್ಟಬೇಕು.


ಒಟ್ಟಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುವ ಮತ್ತು ಸಂಖ್ಯೆ ವೃದ್ಧಿಸುವುದನ್ನು  ನಿಯಂತ್ರಿಸುವ ಕೆಲಸಕ್ಕೆ ಹೆಚ್ಚು ಒತ್ತುನೀಡಬೇಕಾದತುರ್ತುಅವಶ್ಯಕತೆಇದೆ.


ಯಾರೀತ ರೋನಾಲ್ಡ್‌ ರೋಸ್ (13 ಮೇ 1857 – 16 ಸಪ್ಟೆಂಬರ್ 1932)

1857ನೇ ಮೇ 13ರಂದು ಭಾರತದ ಅಲೋರಾ ಎಂಬಲ್ಲಿ (ಈಗಿನ ಉತ್ತರಾಖಂಡ ರಾಜ್ಯದ) ಜನಿಸಿದರು. ಬ್ರಿಟಿಷ್‍ ಭಾರತೀಯ ಸೇನೆಯ ಜನರಲ್‍ ಆಗಿದ್ದ ಸರ್‌ ಕ್ಯಾಂಪ್‍ಬೆಲ್‍ ಗ್ರಾಂಟ್‍ರೋಸ್‍ ಇವರ ಹತ್ತು ಮಕ್ಕಳಲ್ಲಿ ಹಿರಿಯವನೇ ರೋನಾಲ್ಡ್‌ ರೋಸ್. ಪ್ರಾಥಮಿಕ ವೈದ್ಯಕೀಯ ಶಿಕ್ಷಣವನ್ನು ಇಂಗ್ಲೆಂಡಿನಲ್ಲಿ ಮುಗಿಸಿದ ಬಳಿಕ 1881 ಸಪ್ಟೆಂಬರ್ 22ರಂದು ಭಾರತೀಯ ವೈದ್ಯಕೀಯ ಸೇವೆಗೆ ನಿಯುಕ್ತಿಗೊಂಡರು. 1881ರಿಂದ 1894ರವರೆಗೆ ಮದ್ರಾಸ್, ಬರ್ಮಾ, ಅಂಡಮಾನ್, ಬೆಂಗಳೂರು, ಸಿಕಂದರಾಬಾಬಾದ್, ಹೀಗೆ ಅಖಂಡ ಭಾರತದಾದ್ಯಂತ ಸೇನೆಯ ಸರ್ಜನ್ ಆಗಿ ಸೇವೆ ಸಲ್ಲಿಸಿದರು. ಬೆಂಗಳೂರು, ಊಟಿ ಮತ್ತು ಸಿಕಂದರ್‍ಬಾದ್‍ನಲ್ಲಿ ಸೇವೆ ಸಲ್ಲಿಸುವಾಗ ಮಳೆಗಾಲದಲ್ಲಿ ಹೆಚ್ಚು ಮಲೇರಿಯಾ ಬರುವುದನ್ನು ಗಮನಿಸಿ ಸೊಳ್ಳೆಗಳೇ ಮೂಲಕವೇ ಮಲೇರಿಯಾ ಹರಡುತ್ತದೆಎಂದು ನಿಶ್ಚಯಿಸಿದರು. ಕ್ವಿನೈನ್‍ಔಷಧದ ಸೇವನೆಯ ಹೊರತಾಗಿಯೂ, ಸ್ವತಃ ಮೂರು ಬಾರಿ ಮಲೇರಿಯಾರೋಗ ಬಂದರೂ ಹಟ ಬಿಡದ ಚಾಣಕ್ಯನಂತೆ ಸಂಶೋಧನೆ ಮುಂದುವರಿಸಿದರು. 20 ಮಲೇರಿಯಾ ಹರಡುವ ಅನಾಫೆಲಿಸ್ ಸೊಳ್ಳೆಗಳ ಮೊಟ್ಟೆಗಳನ್ನು ಬೆಳೆಸಿ, ಬಳಿಕ ಹುಸೈನ್‍ಖಾನ್ ಎಂಬ ಮಲೇರಿಯಾ ರೋಗಿಗೆ ಈ ಸೊಳ್ಳೆಗಳಿಂದ ಕಡಿಸಿ,ಆ ಬಳಿಕ ಈ ಮಲೇರಿಯಾ ರಕ್ತಹೀರಿದ ಸೊಳ್ಳೆಗಳನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ, ಅವುಗಳ ಹೊಟ್ಟೆಯಲ್ಲಿ ವೃತ್ತಾಕಾರದ ಜೀವಿಯನ್ನು ಪತ್ತೆಹಚ್ಚಿದರು.ಇದುವೇ ಮಲೇರಿಯಾ ಹರಡಿಸುವ ಪರಾವಲಂಬಿ  ಜೀವಿಯಾದ ಪ್ಲಾಸ್ಮೋಡಿಯಂ ಎಂದು ದೃಢಪಟ್ಟಿತು. ಈ ಮಲೇರಿಯಾ ರೋಗಿಯಿಂದ ಸೊಳ್ಳೆಗಳನ್ನು ಕಡಿಸಿಕೊಳ್ಳಲು ಆತ ಖರ್ಚು ಮಾಡಿದ್ದು 20 ಆಣೆಗಳು (ಒಂದು ಕಡಿತಕ್ಕೆ ಒಂದು ಅಣೆಗಳು) ಹೀಗೆ ಆಗಸ್ಟ್ 20, 1897ರಂದು ಈ ಸಂಶೋಧನೆ ಜಗತ್ತಿನ ಹೊಸ ರಹದಾರಿಯನ್ನು ತೆರೆದಿಟ್ಟಿತು. ಅದಕ್ಕಾಗಿಯೇ ಆಗಸ್ಟ್ 20ರಂದು ವಿಶ್ವ ಸೊಳ್ಳೆಗಳ ದಿನ ಎಂದು ಆಚರಿಸಲಾಗುತ್ತಿದೆ.


ಡಾ|| ಮುರಲೀ ಮೋಹನ್‍ಚೂಂತಾರು

ಮಂಗಳೂರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top