|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕಾನಂದರ ಜ್ಞಾನಭಿಕ್ಷಾ ಪಾದಯಾತ್ರೆ: ಇಂದಿಗೆ ತುಂಬಿತು 300 ದಿನ

ವಿವೇಕಾನಂದರ ಜ್ಞಾನಭಿಕ್ಷಾ ಪಾದಯಾತ್ರೆ: ಇಂದಿಗೆ ತುಂಬಿತು 300 ದಿನ




ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ- ಎಂಬ ಘೋಷವಾಕ್ಯದೊಂದಿಗೆ 'ಜ್ಞಾನಭಿಕ್ಷಾ ಪಾದಯಾತ್ರೆಯ ಹೆಸರಿನಲ್ಲಿ ಯಾತ್ರೆ ನಡೆಸುತ್ತಿರುವ ಸಾಮಾಜಿಕ ಚಿಂತಕ ವಿವೇಕಾನಂದ ಹೆಚ್.ಕೆ ಅವರ ರಾಜ್ಯವ್ಯಾಪಿ ಕಾಲ್ನಡಿಗೆಗೆ ಇಂದು 300 ದಿನ ತುಂಬಿತು.


ತಮ್ಮ ಅನುಭವವನ್ನು ಅವರೇ ದಾಖಲಿಸಿಕೊಂಡಿರುವುದು ಇಲ್ಲಿದೆ. ಮುಂದಕ್ಕೆ ಓದಿ:


ಬೀದರಿನಿಂದ ಕೊಡಗು ದಾಟಿ ಹಾಸನದವರೆಗೆ. ವನಮಾರ್ಪಳ್ಳಿಯಿಂದ ಹೊಳೆನರಸೀಪುರದವರೆಗೆ. ಕಲ್ಯಾಣ ಕರ್ನಾಟಕದಿಂದ ಮುಂಬಯಿ ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಕರ್ನಾಟಕ, ಹಳೆ ಮೈಸೂರು ಕರ್ನಾಟಕದವರೆಗೆ. ಕಪ್ಪು ಮಣ್ಣಿನಿಂದ ಕೆಂಪು ಮಣ್ಣಿನವರೆಗೆ.


ಖಡಕ್ ರೊಟ್ಟಿಯಿಂದ ಮಲೆನಾಡ ಕಡುಬು, ಕರಾವಳಿಯ ಮೀನು, ಬಯಲು ಸೀಮೆಯ ರಾಗಿ ಮುದ್ದೆಯವರೆಗೆ. ತೆಲುಗು ಮಿಶ್ರಿತ ಕನ್ನಡದಿಂದ, ಮರಾಠಿ ಮಿಶ್ರಿತ, ಉರ್ದು ಮಿಶ್ರಿತ, ಹಿಂದಿ ಮಿಶ್ರಿತ, ಮಲೆಯಾಳಂ ಮಿಶ್ರಿತ, ಕುಂದಾಪುರ ಕನ್ನಡ, ತುಳು ಕೊಂಕಣಿ ಕೊಡುವ ಅರೆಭಾಷೆ, ಹಳ್ಳಿ ಸೊಗಡಿನ ಹಾಸನದ ಕನ್ನಡದವರೆಗೆ. ಜವಾರಿ ಸೀರೆ ಧೋತಿಯಿಂದ, ಪಂಚೆ ಪೈಜಾಮ‌ ದಾಟಿ ವರ್ಣನೆಗೆ ಕಷ್ಟವಾದ ವಸ್ತ್ರ ವಿನ್ಯಾಸ ಮೀರಿ ಜೀನ್ಸ್ ಚೆಡ್ಡಿಯವರೆಗೆ.


ಹತ್ತಿ ಬೆಳೆಯಿಂದ ಕಬ್ಬು ತೊಗರಿ ಜೋಳ ದ್ರಾಕ್ಷಿ ಸೀಬೆ ದಾಳಿಂಬೆ ಮಾವು ತೆಂಗು ಅಡಿಕೆ ಬಾಳೆ ಆಲೂಗೆಡ್ಡೆಯವರೆಗೆ. ಹಾವಿನಿಂದ ಜಿಗಣೆ ಸೊಳ್ಳೆ ಕೋತಿ ಹಸು ನಾಯಿ ಕುರಿ ಕೋಳಿ ನವಿಲು ಜಿಂಕೆ ಆನೆ ಕರಡಿ ಸೇರಿ ನರಮಾನವನವರೆಗೆ.


ಮೈ ನಡುಗುವ ಚಳಿಯಿಂದ, ದೇಹದ ನೀರು ಬಸಿಯುವ ಬೇಸಿಗೆ ದಾಟಿ, ಬಿರುಗಾಳಿ, ಮಂಜು ಮುಸುಕಿನ ಹಾದಿಯಲ್ಲಿ ಧೋ ಎಂದು ಸುರಿಯುವ ರಭಸದ ಮಳೆ ನಂತರ ತುಂತುರು ಸೋನೆಯವರೆಗೆ. ಪ್ರೀತಿ ಅಭಿಮಾನ ಗೌರವ ಮೊಗೆಮೊಗೆದು ನೀಡುವುದರಿಂದ ಹಿಡಿದು ನಿರ್ಲಕ್ಷ್ಯದವರೆಗೆ. ಪಂಚತಾರಾ ಸೌಕರ್ಯದಿಂದ ರಸ್ತೆ ಬದಿಯವರೆಗೆ. ಕಾಫಿ ಚಹಾದಿಂದ ಎಳನೀರು ದಾಟಿ ಕಬ್ಬಿನ ರಸ ಸೇರಿ ಕಷಾಯದವರೆಗೆ. ಕೆರೆ ಬಾವಿ ಹಳ್ಳ ಕೊಳ್ಳದಿಂದ ನೂರಾರು ನದಿಗಳ ದಾಟಿ ಕೃಷ್ಣ ತುಂಗಾ ಭದ್ರಾ ಶರಾವತಿ ನಂತರ ಸಮುದ್ರಗಳನ್ನು ಮೀರಿ ಹೇಮಾವತಿಯವರೆಗೆ.


13500000 (ಒಂದು ಕೋಟಿ ಮೂವತ್ತೈದು ಲಕ್ಷ) ಹೆಜ್ಜೆಗಳು. 9000 ಕಿಲೋಮೀಟರುಗಳು. 7200 (ಏಳು ಸಾವಿರದ ಇನ್ನೂರು ಗಂಟೆಗಳು) 300 ದಿನಗಳು.


ಇನ್ನೂ ಸಾಗುತ್ತಲೇ ಇದೆ. ಮಾನವೀಯ ಮೌಲ್ಯಗಳ ಪುನರುತ್ಥಾನದ "ಜ್ಞಾನ ಭಿಕ್ಷಾ ಪಾದಯಾತ್ರೆ" ನಿಜ ಮನುಷ್ಯರ ಹುಡುಕುತ್ತಾ.


ಸಮ ಸಮಾಜದ ಕನಸಿನಲ್ಲಿ ಜೀವಪರ ನಿಲುವಿನೊಂದಿಗೆ, ಪರಿಸರದ ಉಳಿವಿಗಾಗಿ ಎಲ್ಲಾ ಭಾವನೆಗಳನ್ನು ಅನುಭವಿಸುತ್ತಾ. ಎಲ್ಲರಲ್ಲೂ ಪ್ರೀತಿ ಎಂಬ ಭಾವವನ್ನು ಸ್ಥಾಯಿಯಾಗಿಸುವ ಆಸೆಯೊಂದಿಗೆ. ಸಾಗುತ್ತಿದೆ ಪಯಣ ಕೊನೆಯ ಉಸಿರಿನವರೆಗೆ.


ಇಲ್ಲಿಯವರೆಗಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆಯ ಒಂದು ಪಕ್ಷಿನೋಟ.

***************


BIDER

****


ವನಮಾರ್ಪಳ್ಳಿ - ಔರಾದ್,

ಔರಾದ್  - ಕಮಲನಗರ,

ಕಮಲನಗರ - ಬಾಲ್ಕಿ,

ಬಾಲ್ಕಿ - ಹುಲಸೂರು,

ಹುಲುಸೂರು - ಬಸವಕಲ್ಯಾಣ,

ಬಸವಕಲ್ಯಾಣ - ಹುಮ್ನಾಬಾದ್,

ಹುಮ್ನಾಬಾದ್ - ಚಿಟಗುಪ್ಪ,

ಚಿಟಗುಪ್ಪ - ಹಳ್ಳಿಖೇಡ್ ಬಿ,

ಹಳ್ಳಿಖೇಡ್  - ಬಸವಗಿರಿ (ಬೀದರ್)

ಬೀದರ್ - ವಿಠ್ಠಲ ಪುರ,


KALABURAGI

******


ವಿಠ್ಠಲ ಪುರ - ಚಿಂಚೋಳಿ,

ಚಿಂಚೋಳಿ - ಕಾಳಗಿ,

ಕಾಳಗಿ - ಕಮಲಾಪುರ,

ಕಮಲಾಪುರ - ಕಲಬುರಗಿ,

ಕಲಬುರಗಿ - ಕಡಗಂಚಿ, (ಕೇಂದ್ರೀಯ ವಿಶ್ವವಿದ್ಯಾಲಯ)

ಕಡಗಂಚಿ - ಆಳಂದ,

ಆಳಂದ - ನಿಂಬರ್ಗಾ,

ನಿಂಬರ್ಗಾ - ಅಫಜಲಪುರ,

ಅಫಜಲಪುರ - ಕೋಳೂರು,ಗುಡ್ಡೇವಾಡಿ, 

ಗುಡ್ಡೇವಾಡಿ - ಯಡ್ರಾಮಿ,

ಯಡ್ರಾಮಿ - ಸೊನ್ನ,

ಸೊನ್ನ - ಜೇವರ್ಗಿ,

ಜೇವರ್ಗಿ  - ವಾಡಿ,

ವಾಡಿ - ಚಿತ್ತಾಪೂರ,

ಚಿತ್ತಾಪೂರ - ಸೇಡಂ,


YADAGIRI

****


ಸೇಡಂ - ಗುರುಮಿಠಕಲ್,

ಗುರುಮಿಠಕಲ್ - ಯಾದಗಿರಿ,

ಯಾದಗಿರಿ - ಶಹಾಪುರ,

ಶಹಾಪುರ - ಸುರಪುರ - ದೇವರ ಗೋನಾಳ್,

ದೇವರ ಗೋನಾಳ - ಕೆಂಭಾವಿ,

ಕೆಂಭಾವಿ - ಹುಣಸಗಿ,

ಹುಣಸಗಿ - ಜಾಲಹಳ್ಳಿ,


RAYACHURU

*******


ಜಾಲಹಳ್ಳಿ - ದೇವದುರ್ಗ,

ದೇವದುರ್ಗ - ಗಬ್ಬೂರು,

ಗಬ್ಬೂರು  - ರಾಯಚೂರು ನಗರ,

ರಾಯಚೂರು  - ಸಿರಿವಾರ, 

ಸಿರಿವಾರ - ಮಾನ್ವಿ,

ಮಾನ್ವಿ - ಸಿಂಧನೂರು,

ಸಿಂಧನೂರು - ಮಸ್ಕಿ,

ಮಸ್ಕಿ - ವಟಗಲ್,

ವಟಗಲ್ - ಹಟ್ಟಿ,

ಹಟ್ಟಿ - ಲಿಂಗಸಗೂರು,


BIJAPURA

****


ಲಿಂಗಸಗೂರು - ನಾಲತವಾಡ,

ನಾಲತವಾಡ - ಮುದ್ದೇಬಿಹಾಳ,

ಮುದ್ದೇಬಿಹಾಳ - ತಾಳಿಕೋಟೆ,

ತಾಳಿಕೋಟೆ - ಮಿಣಜಗಿ,

ಮಿಣಜಗಿ - ಬ್ಯಾಕೋಡ,

ಬ್ಯಾಕೋಡ - ಬಸವನ ಬಾಗೇವಾಡಿ (ಇಂಗಳೇಶ್ವರ)

ಇಂಗಳೇಶ್ವರ - ದೇವರ ಹಿಪ್ಪರಗಿ,

ದೇವರ ಹಿಪ್ಪರಗಿ -  ಸಿಂದಗಿ,   

ಸಿಂದಗಿ -  ಆಲಮೇಲ,

ಅಲಮೇಲ - ಇಂಡಿ,

ಇಂಡಿ - ಚಡಚಣ,

ಚಡಚಣ - ಅರಕೇರಿ,

ಅರಕೇರಿ - ವಿಜಯಪುರ,

ವಿಜಯಪುರ - ತಿಕೋಟಾ,

ತಿಕೋಟಾ - ಬಬಲೇಶ್ವರ,

ಬಬಲೇಶ್ವರ - ಕೊಲ್ಹಾರ,

ಕೊಲ್ಹಾರ - ಮುತ್ತಗಿ,

ಮುತ್ತಗಿ - ಯರನಾಳ,

ಯರನಾಳ - ನಿಡಗುಂದಿ,

ನಿಡಗುಂದಿ - ಆಲಮಟ್ಟಿ,


BAGALAKOTE

******


ಆಲಮಟ್ಟಿ - ಕೂಡಲ ಸಂಗಮ,

ಕೂಡಲ ಸಂಗಮ - ಹುನಗುಂದ - ಇಳಕಲ್,

ಇಳಕಲ್ - ಪಟ್ಟದಕಲ್ಲು,

ಪಟ್ಟದಕಲ್ಲು - ಬಾದಾಮಿ,

ಬಾದಾಮಿ - ಗುಳೇದಗುಡ್ಡ,

ಗುಳೇದಗುಡ್ಡ - ಬಾಗಲಕೋಟೆ,

ಬಾಗಲಕೋಟೆ - ಬೀಳಗಿ,

ಬೀಳಗಿ - ಮುಧೋಳ,

ಮುಧೋಳ - ಜಮಖಂಡಿ,

ಜಮಖಂಡಿ - ಮಹಾಲಿಂಗಪುರ (ಬನಹಟ್ಟಿ / ರಬಕವಿ)

ಮಹಾಲಿಂಗಪುರ - ತೇರದಾಳ,


BELAGAVI

*****


ತೇರದಾಳ - ಅಥಣಿ,

ಅಥಣಿ - ಮೋಳೆ

ಮೋಳೆ - ಕಾಗವಾಡ,

ಕಾಗವಾಡ - ರಾಯಭಾಗ,

ರಾಯಭಾಗ - ಚಿಕ್ಕೋಡಿ,

ಚಿಕ್ಕೋಡಿ - ನಿಪ್ಪಾಣಿ,

ನಿಪ್ಪಾಣಿ - ಸಂಕೇಶ್ವರ,

ಸಂಕೇಶ್ವರ - ಹುಕ್ಕೇರಿ,

ಹುಕ್ಕೇರಿ - ಘಟಪ್ರಭಾ,

ಘಟಪ್ರಭಾ - ಗೋಕಾಕ್,

ಗೋಕಾಕ್ - ಮೂಡಲಗಿ,

ಮೂಡಲಗಿ - ಹುಲಕುಂದ,

ಹುಲಕುಂದ - ರಾಮದುರ್ಗ,

ರಾಮದುರ್ಗ - ಸವದತ್ತಿ,

ಸವದತ್ತಿ - ಬೈಲಹೊಂಗಲ,

ಬೈಲಹೊಂಗಲ - ಬೆಳಗಾವಿ ನಗರ,

ಬೆಳಗಾವಿ ನಗರ - ಖಾನಾಪುರ,

ಖಾನಾಪುರ - ಬೈಲೂರು,

ಬೈಲೂರು - ಕಿತ್ತೂರು,


DARAWAD

****


ಕಿತ್ತೂರು - ಧಾರವಾಡ,

ಧಾರವಾಡ - ಹುಬ್ಬಳ್ಳಿ,

ಹುಬ್ಬಳ್ಳಿ - ಕಲಘಟಗಿ,

ಕಲಘಟಗಿ - ಕುಂದಗೋಳ,

ಕುಂದಗೋಳ - ಅಣ್ಣಿಗೇರಿ,

ಅಣ್ಣಿಗೇರಿ - ನವಲಗುಂದ,


GADAG

***


ನವಲಗುಂದ - ನರಗುಂದ,

ನರಗುಂದ - ಯಾವಗಲ್,

ಯಾವಗಲ್ - ಬೆಳವಣಿಕಿ,

ಬೆಳವಣಿಕಿ - ರೋಣ,

ರೋಣ - ಗಜೇಂದ್ರಗಡ,

ಗಜೇಂದ್ರಗಡ - ನರೇಗಲ್,

ನರೇಗಲ್ - ಗದಗ,

ಗದಗ - ಲಕ್ಷ್ಮೇಶ್ವರ,

ಲಕ್ಷ್ಮೇಶ್ವರ - ಶಿರಹಟ್ಟಿ,

ಶಿರಹಟ್ಟಿ - ಬಾಗೇವಾಡಿ,

ಬಾಗೇವಾಡಿ - ಮುಂಡರಗಿ,

ಮುಂಡರಗಿ - ಕೊಪ್ಪಳ ನಗರ.


KOPPALA

****


ಕೊಪ್ಪಳ ನಗರ - ಕುಕನೂರು,

ಕುಕನೂರು - ಯಲಬುರ್ಗಾ,

ಯಲಬುರ್ಗಾ - ಕುಷ್ಟಗಿ,

ಕುಷ್ಟಗಿ - ಕನಕಗಿರಿ,

ಕನಕಗಿರಿ -  ಗಂಗಾವತಿ,

ಗಂಗಾವತಿ - ಕಾರಟಗಿ,

ಕಾರಟಗಿ - ಶ್ರೀರಾಮ ನಗರ (ದೇಸಾಯಿ ಕ್ಯಾಂಪ್)

ಶ್ರೀರಾಮ ನಗರ - ಕಂಪ್ಲಿ.


BELLARY - VIJAYANAGARA

**********

ಕಂಪ್ಲಿ - ನಡವಿ,

ನಡವಿ - ಸಿರಗುಪ್ಪ,

ಸಿರಗುಪ್ಪ - ಕುರುಗೋಡು,

ಕುರುಗೋಡು - ಬಳ್ಳಾರಿ ನಗರ,

ಬಳ್ಳಾರಿ ನಗರ - ಕುಡತಿನಿ,

ಕುಡತಿನಿ - ತೋರಣಗಲ್ಲು,

ತೋರಣಗಲ್ಲು - ಹಂಪಿ,

ಹಂಪಿ -  ಹೊಸಪೇಟೆ,

ಹೊಸಪೇಟೆ - ಸಂಡೂರು,

ಸಂಡೂರು - ಕೂಡ್ಲಿಗಿ,

ಕೊಟ್ಟೂರು - ಹಗರಿ ಬೊಮ್ಮನಹಳ್ಳಿ

ಹಗರಿ ಬೊಮ್ಮನಹಳ್ಳಿ - ಉತ್ತಂಗಿ,

ಉತ್ತಂಗಿ - ಹೂವಿನ ಹಡಗಲಿ,

ಹೂವಿನ ಹಡಗಲಿ - ಹರಪನಹಳ್ಳಿ,

ಹರಪನಹಳ್ಳಿ - ಅರಿವೆ ಸಿದ್ದಾಪುರ,


HAVERI

****


ಅರಿವೆ ಸಿದ್ದಾಪುರ - ರಾಣೆಬೆನ್ನೂರು

ರಾಣೆಬೆನ್ನೂರು - ರಟ್ಟೆಹಳ್ಳಿ,

ರಟ್ಟೆಹಳ್ಳಿ - ಸರ್ವಜ್ಞನ ಮಾಸೂರು,

ಮಾಸೂರು - ಹಿರೇಕೆರೂರು,

ಹಿರೇಕೆರೂರು - ಬ್ಯಾಡಗಿ,

ಬ್ಯಾಡಗಿ - ಹಾವೇರಿ ನಗರ,

ಹಾವೇರಿ ನಗರ - ಸವಣೂರು,

ಸವಣೂರು - ಶಿಗ್ಗಾಂವ್,

ಶಿಗ್ಗಾಂವ್ - ಹಾನಗಲ್,


UTTARA KANNADA

***********


ಹಾನಗಲ್ - ಮುಂಡಗೋಡ,

ಮುಂಡಗೋಡ - ಬಿಸಿಲೆಕೊಪ್ಪ (ಎಕ್ಕುಂಬಿ)

ಎಕ್ಕುಂಬಿ - ಸಿರಸಿ,

ಸಿರಸಿ - ಉಮ್ಮಜಗಿ,

ಉಮ್ಮಜಗಿ - ಯಲ್ಲಾಪುರ,

ಯಲ್ಲಾಪುರ - ಭಾಗವತಿ,

ಭಾಗವತಿ - ಹಳಿಯಾಳ,

ಹಳಿಯಾಳ - ದಾಂಡೇಲಿ,

ದಾಂಡೇಲಿ -  ಜೋಯಿಡಾ,

ಜೋಯಿಡಾ - ಕದ್ರ,

ಕದ್ರ - ಕಾರವಾರ ನಗರ,

ಕಾರವಾರ ನಗರ - ಅಂಕೋಲ,

ಅಂಕೋಲ - ಕುಮಟಾ,

ಕುಮಟಾ - ಹೊನ್ನಾವರ,

ಹೊನ್ನಾವರ - ಮುರುಡೇಶ್ವರ,

ಮುರುಡೇಶ್ವರ - ಭಟ್ಕಳ,

ಭಟ್ಕಳ - ಇಡಗುಂಜಿ,

ಇಡಗುಂಜಿ - ಗೇರುಸೊಪ್ಪ,

ಗೇರುಸೊಪ್ಪ - ಮಾವಿನಗುಂಡಿ,

ಮಾವಿನಗುಂಡಿ - ಸಿದ್ದಾಪುರ,


SHIVAMOGGA

********

ಸಿದ್ದಾಪುರ - ಸೊರಬ,

ಸೊರಬ - ಶಿರಾಳಕೊಪ್ಪ,

ಶಿರಾಳಕೊಪ್ಪ - ಶಿಕಾರಿಪುರ,

ಶಿಕಾರಿಪುರ - ಆನಂದಪುರಂ,

ಸಾಗರ - ಹೆಗ್ಗೋಡು,

ಹೆಗ್ಗೋಡು - ಬಟ್ಟೆ ಮಲ್ಲಪ್ಪ,

ಬಟ್ಟೆ ಮಲ್ಲಪ್ಪ - ಹೊಸ ನಗರ,

ಹೊಸ ನಗರ - ಸೊನಲೆ,

ಸೊನಲೆ - ತೀರ್ಥಹಳ್ಳಿ,

ತೀರ್ಥಹಳ್ಳಿ - ಮಂಡಗದ್ದೆ,

ಮಂಡಗದ್ದೆ - ಶಿವಮೊಗ್ಗ ನಗರ,

ಶಿವಮೊಗ್ಗ ನಗರ - ಕಾಚಿನಕಟ್ಟೆ,

ಕಾಚಿನಕಟ್ಟೆ - ಭದ್ರಾವತಿ,

ಭದ್ರಾವತಿ - ಸನ್ಯಾಸಿ ಕೊಡಮಗ್ಗಿ,

ಸನ್ಯಾಸಿ ಕೊಡಮಗ್ಗಿ -

********


DAVANAGERE

********


ಸನ್ಯಾಸಿ ಕೊಡಮಗ್ಗಿ - ಚನ್ನಗಿರಿ,

ಚನ್ನಗಿರಿ - ಬಸವಾಪಟ್ಟಣ,

ಬಸವಾಪಟ್ಟಣ - ಹೊನ್ನಾಳಿ + ನ್ಯಾಮತಿ,

ನ್ಯಾಮತಿ - ಕೊಮಾರನಹಳ್ಳಿ,

ಕೊಮಾರನಹಳ್ಳಿ - ಮಲ್ಲನಾಯಕನಹಳ್ಳಿ,

ಮಲ್ಲನಾಯಕನಹಳ್ಳಿ - ಹಿರಿಯೂರು,

ಹಿರಿಯೂರು - ದಾವಣಗೆರೆ,

ದಾವಣಗೆರೆ - ಹೆಮ್ಮನ ಬೈತೂರು,

ಹೆಮ್ಮನ ಬೈತೂರು - ಜಗಳೂರು,


CHITRADURGA

*********


ಜಗಳೂರು - ಸೂರಮನಹಳ್ಳಿ,

ಸೂರಮನಹಳ್ಳಿ - ಮೊಳಕಾಲ್ಮೂರು,

ಮೊಳಕಾಲ್ಮೂರು ‌- ಕೊಂಡ್ಲಹಳ್ಳಿ,

ಕೊಂಡ್ಲಹಳ್ಳಿ - ಚಳ್ಳಕೆರೆ,

ಚಳ್ಳಕೆರೆ - ಸಾಣೇಕೆರೆ (ವೇದ ಶಾಲೆ)

ಸಾಣೇಕೆರೆ - ಹಿರಿಯೂರು,

ಹಿರಿಯೂರು - ಮೆಟಗುರ್ಕಿ,

ಮೆಟಗುರ್ಕಿ - ಚಿತ್ರದುರ್ಗ,

ಚಿತ್ರದುರ್ಗ - ಹೊಳಲ್ಕೆರೆ,

ಹೊಳಲ್ಕೆರೆ - ಮದುರೆ,

ಮದುರೆ - ಹೊಸ ದುರ್ಗ,

ಹೊಸದುರ್ಗ - ಸಾಣೇಹಳ್ಳಿ,


CHIKKAMAGALORE

*********


ಸಾಣೇಹಳ್ಳಿ - ಅಜ್ಜಂಪುರ,

ಅಜ್ಜಂಪುರ - ತರೀಕೆರೆ,

ತರೀಕೆರೆ - ಬೀರೂರು (ಕಡೂರು)

ಬೀರೂರು - ಸಖರಾಯಪಟ್ಟಣ,

ಸಖರಾಯಪಟ್ಟಣ -‌  ಚಿಕ್ಕಮಗಳೂರು,

ಚಿಕ್ಕಮಗಳೂರು - ಕೂದುವಳ್ಳಿ,

ಕೂದುವಳ್ಳಿ - ಮೂಡಿಗೆರೆ,

ಮೂಡಿಗೆರೆ - ಜಾವಳಿ,

ಜಾವಳಿ - ಕಳಸ,

ಕಳಸ -  ಬಾಳೆಹೊನ್ನೂರು,

ಬಾಳೆಹೊನ್ನೂರು - ಎನ್ ಆರ್ ಪುರ,

ಎನ್ ಆರ್ ಪುರ - ಕೊಪ್ಪ,

ಕೊಪ್ಪ - ಶೃಂಗೇರಿ,

ಶೃಂಗೇರಿ - ಕೆರೆಕಟ್ಟೆ,


UDUPI

**†****


ಕೆರೆಕಟ್ಟೆ - ಕಾರ್ಕಳ,

ಕಾರ್ಕಳ ‌- ಹೆಬ್ರಿ,

ಹೆಬ್ರಿ - ಶಂಕರನಾರಾಯಣ,

ಶಂಕರನಾರಾಯಣ - ನಾವುಂದ,

ನಾವುಂದ - ಬೈಂದೂರು - ನಾವುಂದ,

ನಾವುಂದ - ಕುಂದಾಪುರ,

ಕುಂದಾಪುರ -  ಬ್ರಹ್ಮಾವರ (ಸಾಲಿಗ್ರಾಮ)

ಸಾಲಿಗ್ರಾಮ - ಉಡುಪಿ,

ಉಡುಪಿ - ಕಾಪು (ಪಡುಬಿದ್ರಿ)


DAKSHINA KANNADA

**********


ಪಡುಬಿದ್ರಿ - ಸುರತ್ಕಲ್ (ಮುಲ್ಕಿ)

ಸುರತ್ಕಲ್ -  ಮಂಗಳೂರು,

ಮಂಗಳೂರು - ಬಂಟ್ವಾಳ,

ಬಂಟ್ವಾಳ - ಮೂಡಬಿದ್ರೆ,

ಮೂಡಬಿದ್ರೆ - ವೇಣೂರು,

ವೇಣೂರು - ಬೆಳ್ತಂಗಡಿ

ಬೆಳ್ತಂಗಡಿ - ಉಪ್ಪಿನಂಗಡಿ,

ಉಪ್ಪಿನಂಗಡಿ - ಪುತ್ತೂರು,

ಪುತ್ತೂರು - ಅಲಂಕಾರು,

ಅಲಂಕಾರು - ಕಡಬ,

ಕಡಬ - ಬೆಳ್ಳಾರೆ,

ಬೆಳ್ಳಾರೆ - ಸುಳ್ಯ,


KODAGU

******

ಸುಳ್ಯ - ಸಂಪಾಜೆ (ಕಲ್ಗುಂಡಿ),

ಸಂಪಾಜೆ - ಮದೆನಾಡು,

ಮದೆನಾಡು - ಮಡಿಕೇರಿ,

ಮಡಿಕೇರಿ - ಮೂರ್ನಾಡು,

ಮೂರ್ನಾಡು - ವಿರಾಜಪೇಟೆ,

ವಿರಾಜಪೇಟೆ - ಪೊನ್ನಂಪೇಟೆ (ಗೋಣಿಕೊಪ್ಪಲು)

ಗೋಣಿಕೊಪ್ಪಲು - ಸಿದ್ದಾಪುರ (ನೆಲ್ಲಿ ಹುದಿಕೇರಿ)

ಸಿದ್ದಾಪುರ - ಕುಶಾಲನಗರ,

ಕುಶಾಲನಗರ - ಸೋಮವಾರಪೇಟೆ,

ಸೋಮವಾರಪೇಟೆ - ಶನಿವಾರಸಂತೆ


HASANA

******

ಶನಿವಾರಸಂತೆ - ಅರಕಲಗೂಡು,

ಅರಕಲಗೂಡು -

**************


ನಿನ್ನೆ 26/8/2021 ಗುರುವಾರ 299 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಕೊಡಗು ಜಿಲ್ಲೆಯ ಶನಿವಾರಸಂತೆ ಗ್ರಾಮದಿಂದ ಸುಮಾರು‌ 22 ಕಿಲೋಮೀಟರ್  ದೂರದ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು  ತಲುಪಿತು. 


ಬೆಳಗ್ಗೆ ಶನಿವಾರಸಂತೆಯ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.


ಸಂಜೆ ಅರಕಲಗೂಡಿನಲ್ಲಿ ಕೆಲವು ಗೆಳೆಯರೊಂದಿಗೆ ಮಾತುಕತೆ ನಡೆಸಲಾಯಿತು.


ಇಂದು 27/8/2021 ಶುಕ್ರವಾರ 300 ನೆಯ ದಿನ ನಮ್ಮ ಕಾಲ್ನಡಿಗೆ ಹಾಸನ ಜಿಲ್ಲೆಯ ಅರಕಲಗೂಡಿನಿಂದ ಭಾರತದ ಪ್ರಧಾನ ಮಂತ್ರಿಗಳಾಗಿದ್ದ ದೇವೇಗೌಡರು ಪ್ರತಿನಿಧಿಸುತ್ತಿದ್ದ ಸುಮಾರು 21 ಕಿಲೋಮೀಟರ್ ‌ದೂರದ ಹೊಳೆನರಸೀಪುರ ತಾಲ್ಲೂಕು ತಲುಪಲಿದೆ.


ನಾಳೆ 28/8/2021 ಶನಿವಾರ 301 ನೆಯ ದಿನ ನಮ್ಮ ಕಾಲ್ನಡಿಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನತ್ತ. ಮುಂದೆ ಹಾಸನ ನಗರದತ್ತ. ಆಸಕ್ತರು ಭಾಗವಹಿಸಬಹುದು.

(9844013068)


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post