ಗೋವಾ ರಾಜ್ಯಾದ್ಯಂತ ಕರವೇ ಘಟಕಗಳ ಸ್ಥಾಪನೆ: ಮಂಜುನಾಥ ನಾಟೇಕರ್

Upayuktha
0


ಪಣಜಿ: ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಕನ್ನಡಿಗರ ಆಸ್ತಿ, ನಾವು ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಸದಾ ಕಂಕಣ ಬದ್ಧರಾಗಿದ್ದೇವೆ. ಗೋವಾ ರಾಜ್ಯಾದ್ಯಂತ ಕರವೇ ತನ್ನ ಘಟಕಗಳನ್ನು ಸ್ಥಾಪಿಸುವ ಮೂಲಕ ಗೋವಾದ ಎಲ್ಲೆಡೆ ಕನ್ನಡಿಗರ ಒಗ್ಗೂಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿದೆ. ಮುಂಬರುವ ದಿನಗಳಲ್ಲಿಯೂ ಕೂಡ ಇದೇ ರೀತಿ ಗೋವಾ ಕನ್ನಡಿಗರ ಪರ ರಕ್ಷಣಾ ವೇದಿಕೆ ನಿಂತು ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದೆ ಎಂದು ಕರವೇ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ನುಡಿದರು.


ಕರ್ನಾಟಕ ರಕ್ಷಣಾ ವೇದಿಕೆ ಗೋವಾ ನ್ಯೂ ವಾಡೆಮ್ ಘಟಕದ ವತಿಯಿಂದ ನ್ಯೂ ವಾಡೆಮ್ ನಗರದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ಮಾತನಾಡುತ್ತಿದ್ದರು.


ಈ ಸಂದರ್ಭದಲ್ಲಿ ಕರವೇ ಗೋವಾ ರಾಜ್ಯ ಕಾರ್ಯದರ್ಶಿ ಶಿವಾನಂದ್ ಮಸಬಿನಾಳ, ರಾಜ್ಯ ಖಜಾಂಚಿ ವೈ ಎಸ್ ಬಿರಾದರ್, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ಸ್ವಾಮಿ ಹಿರೇಮಠ,ರಾಜ್ಯ ಸಂಘಟನಾ ಕಾರ್ಯದರ್ಶಿ, ರಮೇಶ್ ಗೌಡರ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಾಲ್ಮೀಕಿ, ಸಂಘಟನಾದ್ಯಕ್ಷರು ಹಾಗೂ ಮಾಧ್ಯಮ ಸಂಚಾಲಕ ರಮೇಶ್ ಮಾದರ್, ರಾಜ್ಯ ಸಹಕಾರದರ್ಶಿ ಪರಶುರಾಮ್ ಪೂಜಾರಿ, ರಾಜ್ಯ ಸಹಕಾರದರ್ಶಿ ಶಿವು ತಲ್ವಾರ್ ಜುವಾರಿ ನಗರ ಘಟಕದ ಅಧ್ಯಕ್ಷ  ಬಸವರಾಜ್ ಗೌಡರ್, ಸಲಹೆಗಾರ ಮಹೇಶ್ ಹಡಪದ್, ಜುವಾರಿ ನಗರ ಘಟಕದ ಮುಖಂಡ ಮಹೇಶ್ ಆಲೂರು ಯುವ ಘಟಕದ ಸಂಚಾಲಕರು ಆಶಿಶ್ ಗೌಡರ್, ನ್ಯೂ ವಾಡೆಮ್ ಘಟಕದ ಅಧ್ಯಕ್ಷ ರಾಜು ಹರಿಜನ್ ಹಾಗೂ  ಘಟಕದ ಪದಾಧಿಕಾರಿಗಳಾದ ನಾಗರಾಜ್ ಪುರುಷೋತ್ತಮ್, ಪರಶು ಮುತ್ತಣ್ಣ, ಅಶೋಕ್ ಈಶ್ವರ್, ಸಂಗಪ್ಪ ಆನಂದ್ ಉಮೇಶ್ ರಮೇಶ್ ಮೌನೇಶ್ ನಾಗು ಮರಿಯಪ್ಪ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top