ಮಂಗಳಗಂಗೋತ್ರಿ: ಗಾಂಧಿಯವರು ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆ ಭಾರತದ ಸಂವಿಧಾನದ ಅಂತರ್ಗತ ಮೌಲ್ಯಗಳು. ಅದನ್ನು ಘನತೆಯಿಂದ ಸ್ವೀಕರಿಸಿದ್ದರೆ ಇಂದಿನ ಹಿಂಸಾತ್ಮಕ ವಾತಾವರಣ ಸೃಷ್ಟಿಯಾಗುತ್ತಿರಲಿಲ್ಲ. ಹಿಂಸೆ ಮಾಡುವವರು ದುರ್ಬಲರು. ದುರ್ಬಲರು ಭಯದಿಂದ ಹಿಂಸೆಗಿಳಿಯುತ್ತಾರೆ. ಗಾಂಧಿ ಅಹಿಂಸೆಯನ್ನು ಮುಂದೊಡ್ಡಿ ಜಗತ್ತಿಗೆ ಭರವಸೆ ಮೂಡಿಸಿದ ನೈತಿಕ ಶಕ್ತಿ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಗಣನಾಥ ಎಕ್ಕಾರು ಹೇಳಿದರು.
ಅವರು ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಸಂಸ್ಥೆ ಮತ್ತು ಮಂಗಳೂರಿನ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಸಭಾಂಗಣದಲ್ಲಿ ಸ್ವಾತಂತ್ರೋತ್ಸವ ೭೫ ಗಾಂಧಿ ಚಿಂತನ ಕಾರ್ಯಕ್ರಮದಲ್ಲಿ ಸತ್ಯ, ಅಹಿಂಸೆ ಘನತೆವೆತ್ತ ಸಮಾಜ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق